ಘಾಟಿ ಸುಬ್ರಹ್ಮಣ್ಯ ಜಾತ್ರೆ ಆರಂಭ: ಜ.19 ರಂದು ಬ್ರಹ್ಮ ರಥೋತ್ಸವ
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳಗಲ್ಲಿ ಒಂದಾದ ಘಾಟಿ ಕ್ಷೇತ್ರದಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಜನವರಿ 19 ರಂದು ನಡೆಯಲಿದೆ.
ಜನವರಿ 15 ರ ಮಂಗಳವಾರ ಘಾಟಿಯ ದೇವಾಂಗ ಮಂಡಳಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ರಥೋತ್ಸವದ ಅಂಕುರಾರ್ಪಣೆ ಕಾರ್ಯಕ್ರಮ ಜರುಗಿದ್ದು , ಜ. 27 ರವರೆಗೂ ರಾಜಬೀದಿ ಉತ್ಸವ ನಡೆಯಲಿದೆ. ಫೆ. 17 ರ ಭಾನುವಾರ ತೆಪ್ಪೋತ್ಸವ ಪೂಜಾ ಕಾರ್ಯಕ್ರಮ ನಡೆಯವುದು.
ಜಾತ್ರೆಯ ಆರಂಭದಿಂದ ಮಾಘ ಶುದ್ಧ ಷಷ್ಠಿಯವರೆಗೆ ಸುಬ್ರಹ್ಮಣ್ಯನಿಗೆ ವಿಶೇಷ ಅಭಿಷೇಕ ಮಜ್ಜನ ಹಮ್ಮಿಕೊಳ್ಳಲಾಗಿದ್ದು , ಈ ಮಜ್ಜನ ಬೆಳಗ್ಗೆ 9 ಗಂಟೆವರೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ಈಗಾಗಲೇ ರಾಸುಗಳ ಜಾತ್ರೆ ಆರಂಭವಾಗಿದ್ದು ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಜಾನುವಾರುಗಳು ಜಾತ್ರೆಯಲ್ಲಿ ಭಾಗವಹಿಸಿವೆ. ರಾಸುಗಳ ವ್ಯಾಪಾರವೂ ಜೋರಾಗಿದೆ.
ಬೆಂಗಳೂರಿನಿಂದ ವಿಶೇಷ ಬಸ್ : ಜ.19 ರಂದು ನಡೆಯುವ ಬ್ರಹ್ಮ ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಘಾಟಿಗೆ ಆಗಮಿಸುವ ನಿರೀಕ್ಷೆಯಿದೆ. ಅಂದು ಬೆಂಗಳೂರಿನಿಂದ ಘಾಟಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಲ್ಪಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...