ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೀಘ್ರದಲ್ಲೇ ರಾಜ್ಯದಲ್ಲಿ ರೈತ ವಿಮೆ : ರೈತರು 100 ರು. ಪ್ರೀಮಿಯಂ ಕಟ್ಟಬೇಕು
ಬೆಂಗಳೂರು : ಸದ್ಯದಲ್ಲೇ ರಾಜ್ಯದಲ್ಲಿ ರೈತ ವಿಮಾ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಕೃಷಿ ಮಾರುಕಟ್ಟೆ ಸಚಿವ ಬಿ.ಎಸ್.ಪಾಟೀಲ್ ಮಂಗಳವಾರ ಹೇಳಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮ್ಮೇಳನ ಉದ್ಘಾಟಿಸಿ ಅವರ ಮಾತಾಡುತ್ತಿದ್ದರು. ರೈತ ನೂರು ರುಪಾಯಿ ಪ್ರೀಮಿಯಂ ಕಟ್ಟಬೇಕು. ಸರ್ಕಾರ ಅಷ್ಟೇ ಹಣವನ್ನು ಭರಿಸುತ್ತದೆ. ಜೀವ ವಿಮಾ ನಿಗಮ ಈ ಹಣವನ್ನು ಸಂಗ್ರಹಿಸಿ, ಆಯಾ ರೈತರ ಹೆಸರಿನಲ್ಲಿ ವಿಮೆ ಮಾಡಲಿದೆ. ಅಸಹಜವಾಗಿ ಮೃತಪಡುವ ರೈತರಿಗೆ 50 ಸಾವಿರ ಹಾಗೂ ಸಹಜ ಸಾವನ್ನಪ್ಪುವ ರೈತರಿಗೆ 20 ಸಾವಿರ ರುಪಾಯಿ ಮೊತ್ತದ ವಿಮೆ ಪರಿಹಾರ ದೊರೆಯಲಿದೆ ಎಂದರು.
ಆವರ್ತ ನಿಧಿ : ಬೆಂಬಲ ಬೆಲೆ ಕುಸಿದಾಗ ರೈತರಿಗೆ ನ್ಯಾಯ ಬೆಲೆ ಕೊಟ್ಟು, ಬೆಳೆ ಖರೀದಿಸುವ ಸಲುವಾಗಿ 400 ಕೋಟಿ ರುಪಾಯಿ ಆವರ್ತ ನಿಧಿಯನ್ನು ಸರ್ಕಾರ ಸ್ಥಾಪಿಸಿದೆ. ಈ ನಿಧಿಗೆ ಕೇಂದ್ರ ಸರ್ಕಾರ 200 ಕೋಟಿ ರುಪಾಯಿ ನೆರವನ್ನು ಕೊಟ್ಟಿದೆ ಎಂದು ಪಾಟೀಲ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, January 16, 2002, 5:30 [IST]