For Daily Alerts
ಬಾಗಲಕೋಟೆ : ಆರೆಸ್ಸೆಸ್ಸಿಗರ ಮೇಲೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ
ಬೆಂಗಳೂರು : ಬಾಗಲಕೋಟೆಯಲ್ಲಿ ಕವಾಯತು ಅಭ್ಯಾಸದಲ್ಲಿ ತೊಡಗಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರೆಸ್ಸೆಸ್)ದವರ ಮೇಲೆ ಯುವಕರ ತಂಡವೊಂದು ಶುಕ್ರವಾರ ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಆರೆಸ್ಸೆಸ್ಸಿಗರಿಗೆ ಗಾಯಗಳಾಗಿವೆ.
ಗಾಯಗೊಂಡವರನ್ನು ಶಿವಕುಮಾರ್ (23) ಹಾಗೂ ಬಸವರಾಜ್ (20) ಎಂದು ಗುರುತಿಸಲಾಗಿದೆ. ಅಂಜುಮನ್ ಹೈಸ್ಕೂಲ್ ಬಳಿ ಕವಾಯತಿನಲ್ಲಿ ತೊಡಗಿದ್ದ 30-40 ಆರೆಸ್ಸೆಸ್ಸಿಗರ ಮೇಲೆ ಇದ್ದಕ್ಕಿದ್ದಂತೆ 11 ಯುವಕರು ಕಲ್ಲು ತೂರಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಆರೆಸ್ಸೆಸ್ಸಿಗರೂ ಕಲ್ಲು ತೂರಿದರು. ರಸ್ತೆಯಲ್ಲಿ ನಿಂತಿದ್ದ ಕಾರೊಂದರ ಗಾಜು ಪುಡಿಪುಡಿಯಾಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಸುಧಾರಿಸಿದರು.
ಗಾಯಾಳಗಳು ಈಗ ಚೇತರಿಸಿಕೊಂಡಿದ್ದಾರೆ. ಬಾಗಲಕೋಟೆ ನಗರದೆಲ್ಲೆಡೆ ಬಿಗಿ ಪೊಲೀಸ್ ಪಹರೆ ನಿಯೋಜಿಸಿದ್ದೇವೆ. ಜನವರಿ 22ರವರೆಗೆ 144ನೇ ವಿಧಿಯನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Friday, January 11, 2002, 5:30 [IST]