ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಮೀನು ಬರ’ದಿಂದ ಕಂಗೆಟ್ಟ ಮೀನುಗಾರರಿಂದ ಜ.15 ರಂದು ರ್ಯಾಲಿ
ಮಂಗಳೂರು : ಕರಾವಳಿಯ ಮೀನುಗಾರರು ‘ಮೀನು ಬರ’ ಎದುರಿಸುತ್ತಿದ್ದು , ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೀನುಗಾರರ ನೆರವಿಗೆ ಧಾವಿಸಬೇಕೆಂದು ಕರಾವಳಿ ಮೀನುಗಾರರ ಕಾರ್ಯಕಾರಿ ಸಮಿತಿ(ಸಿಕೆಎಫ್ಎಸಿ)ಒತ್ತಾಯಿಸಿದೆ.
ದಿನೇ ದಿನೇ ಕುಸಿಯುತ್ತಿರುವ ಮೀನುಗಳ ಸಂಖ್ಯೆಯಿಂದಾಗಿ ಮೀನುಗಾರರು ದಿಕ್ಕು ಕಾಣದಾಗಿದ್ದಾರೆ. ಮೀನುಗಳ ಸಂಖ್ಯೆ ಪ್ರತಿಶತ 25 ಕ್ಕಿಂತಲೂ ಕಡಿಮೆಯಾಗಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಕೆಎಫ್ಎಸಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಜನವರಿ 15 ರಂದು ಸಿಕೆಎಫ್ಎಸಿ ‘ಮೀನುಗಾರರ ರ್ಯಾಲಿ’ ನಡೆಸಲಿದೆ ಎಂದು ಮಧ್ವರಾಜ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Thursday, January 10, 2002, 5:30 [IST]