ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈದ್ಗಾ ಮೈದಾನ ವಿವಾದ ನಿವಾರಿಸುವ ಹೊಣೆ ಎಚ್ಕೆಪಾಟೀಲರ ಹೆಗಲಿಗೆ
ಹುಬ್ಬಳ್ಳಿ: ವಿವಾದಿತ ಈದ್ಗಾ ಮೈದಾನ ಪ್ರಕರಣವನ್ನು ಸೌಹಾರ್ಧ ಮಾತುಕತೆಯ ಮೂಲಕ ಬಗೆಹರಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರ, ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಅವರಿಗೆ ನೀಡಿದೆ.
ಈ ವಿಷಯವನ್ನು ಎಚ್. ಕೆ. ಪಾಟೀಲರೇ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈದ್ಗಾ ಮೈದಾನ ವಿವಾದ ಪ್ರಕರಣ ಇತ್ಯರ್ಥ ಸಮಿತಿಯಿಂದ ಮೂರು ಸಾವಿರ ಮಠದ ಡಾ. ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಹೊರ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಈ ನಿರ್ಧಾರ ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದಂತೆ ಹುಬ್ಬಳ್ಳಿಯ, ಹಿಂದೂ ಹಾಗೂ ಮುಸ್ಲಿಂ ಗಣ್ಯರೊಂದಿಗೆ ಚರ್ಚೆ ಆರಂಭಿಸಿದ್ದೇನೆ ಎಂದು ಪಾಟೀಲ್ ತಿಳಿಸಿದರು.
ಈದ್ಗಾ ಮೈದಾನ ವಿವಾದ ಹಲವು ವರ್ಷಗಳಿಂದ ಬಿಕ್ಕಟ್ಟಾಗಿ ಪರಿಣಮಿಸಿದೆ. ಎರಡೂ ಕೋಮಿನವರ ಮನ ನೋಯದಂತೆ ಈ ಸಮಸ್ಯೆಯನ್ನು ಪರಿಹರಿಸುವ ಸರಕಾರದ ಉದ್ದೇಶವನ್ನು ಈಡೇರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಸಚಿವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, January 8, 2002, 5:30 [IST]