ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಾಯಿ ಲಾಮಾಗೆ ಚಿತ್ರದುರ್ಗ ಮುರುಘಾಮಠದ ಬಸವಶ್ರೀ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಮಠ ಪ್ರತಿವರ್ಷ ನೀಡುವ ಬಸವಶ್ರೀ ಪ್ರಶಸ್ತಿಗೆ ಈ ಬಾರಿ ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಪರಿಸರ ಪ್ರೇಮಿ, ಬೌದ್ಧ ಸನ್ಯಾಸಿ ಹಾಗೂ 14ನೇ ದಲಾಯಿ ಲಾಮಾ, ಟೆಂಜಿನ್‌ ಗ್ಯಾತ್ಸೋ ಅವರು ಬಸವಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಾಗಿ ಮುರುಘಾಮಠದ ಪ್ರಕಟಣೆ ತಿಳಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಫಲಕವನ್ನೊಳಗೊಂಡಿರುತ್ತದೆ.

1950ರಿಂದ ದೇಶಭ್ರಷ್ಟರಾಗಿ ತಮ್ಮ ಲಕ್ಷಗಟ್ಟಲೆ ಅನುಯಾಯಿಗಳೊಂದಿಗೆ ಟಿಬೆಟ್‌ ಬಿಟ್ಟು ಹೊರಹೋದ ಲಾಮಾ ಅವರು 33 ದೇಶಗಳಲ್ಲಿ ಚದುರಿ ಹೋಗಿದ್ದ ದೇಶಪ್ರೇಮಿ ಜನರನ್ನು ಒಗ್ಗೂಡಿಸಲು ಶ್ರಮಿಸಿದವರು. ನಂತರ ಅನಿವಾಸಿ ಟಿಬೆಟ್‌ ಸರಕಾರ ರಚಿಸಿ ಅದರ ನೇತೃತ್ವವನ್ನು ವಹಿಸಿ ಬೌದ್ಧ ತತ್ವವನ್ನು ಪಾಲಿಸುತ್ತಿದ್ದಾರೆ.

2002 ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭ, ಸೆಪ್ಟೆಂಬರ್‌ ಐದರಂದು ಚಿತ್ರದುರ್ಗ ಮಠದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಹಾಗೂ ಶರಣರ ಸ್ಮರಣೋತ್ಸವ ಕಾರ್ಯಕ್ರಮಗಳೂ ನಡೆಯಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X