ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದಿಂದ ಅಖಿಲ ಭಾರತ ಅಂತರ ಬ್ಯಾಂಕ್‌ ಅಥ್ಲೀಟ್‌ ಕೂಟ

By Staff
|
Google Oneindia Kannada News

ಬೆಂಗಳೂರು : ಅಖಿಲ ಭಾರತ 13 ನೇ ಅಂತರ ಬ್ಯಾಂಕ್‌ ಅಥ್ಲೀಟ್‌ ಕೂಟ ಜನವರಿ 10 ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೆನರಾಬ್ಯಾಂಕ್‌ ಆಯೋಜಿಸಿರುವ ಈ ಕೂಟದಲ್ಲಿ 13 ಬ್ಯಾಂಕ್‌ಗಳ ಒಟ್ಟು 90 ಸ್ಪರ್ಧಿಗಳು ಭಾಗವಹಿಸುವರು. 19 ವಿಭಾಗಗಳಲ್ಲಿ ಪುರುಷರ ಸ್ಪರ್ಧೆಗಳು ಹಾಗೂ 10 ವಿಭಾಗಗಳಲ್ಲಿ ಮಹಿಳೆಯರ ಸ್ಪರ್ಧೆಗಳು ನಡೆಯಲಿವೆ ಎಂದು ಕೆನರಾಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಎನ್‌.ಕಾಂತಕುಮಾರ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಂ.ಕೆ.ಆಶಾ, ಸುಮವಂತಿ, ವನಜಾ ಸೋಮಯ್ಯ, ವಂದನಾ ರಾವ್‌, ರೀತಾ ಅಬ್ರಹಾಂ, ಪೂನಂ ಬೆಳ್ಳಿಯಪ್ಪ , ಎಸ್‌.ಜಯಂತಿ, ವಿ.ಜಯಲಕ್ಷ್ಮಿ , ಅಂಜಲಾ ಲಾನ್ಸಿ , ಕೆ.ಶಂಕರ್‌, ಪಿ.ಕಣ್ಣನ್‌, ಅಜಿತ್‌ ಕುಮಾರ್‌ ಮುಂತಾದ ಖ್ಯಾತನಾಮರು ಈ ಕೂಟದಲ್ಲಿ ಭಾಗವಹಿಸುವರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X