ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳೆಗೇರಿವಾಸಿಗಳ ಬೆರಳಚ್ಚು, ಫೋಟೋ ಸಂಗ್ರಹವಿಲ್ಲ -ಸಾಂಗ್ಲಿಯಾನಾ

By Staff
|
Google Oneindia Kannada News

ಬೆಂಗಳೂರು: ಸಾರ್ವಜನಿಕ ವಲಯದಿಂದ ಟೀಕೆಗೊಳಗಾದ ಕೊಳೆಗೇರಿ ನಿವಾಸಿಗಳ ಭಾವ ಚಿತ್ರ ಹಾಗೂ ಬೆರಳಚ್ಚು ಸಂಗ್ರಹಅಭಿಯಾನವನ್ನು ಕೈ ಬಿಡಲಾಗಿದೆ.

ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ನಗರ ಪೊಲೀಸ್‌ ಆಯುಕ್ತ ಎಚ್‌. ಟಿ. ಸಾಂಗ್ಲಿಯಾನಾ ತಿಳಿಸಿದರು. ಈ ಅಭಿಯಾನಕ್ಕೆ ಬದಲಾಗಿ ಕೊಳೆಗೇರಿಗಳಲ್ಲಿ ಸ್ಥಳೀಯ ನಿವಾಸಿಗಳನ್ನೊಳಗೊಂಡ ಜಾಗೃತಿ ದಳಗಳನ್ನು ರಚಿಸಲಾಗುವುದು ಎಂದು ಸಾಂಗ್ಲಿಯಾನಾ ಹೇಳಿದರು.

ಜಾಗೃತ ದಳವು ಅಪರಾಧ ಕಾರ್ಯಗಳಲ್ಲಿ ಭಾಗವಹಿಸುವ ಮತ್ತು ಬೇರೆಡೆ ಅಪರಾಧವೆಸಗಿ ಕೊಳೆಗೇರಿಗಳಲ್ಲಿ ಬಂದು ಆಶ್ರಯ ಪಡೆಯುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಿದೆ. ನಗರದ ಕೊಳೆಗೇರಿಯಲ್ಲಿ ವಾಸಿಸುವ ಯುವಕರು ಅಪರಾಧ ಕೃತ್ಯಗಳಿಗೆ ಶರಣಾಗುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬೆರಳಚ್ಚು ಮತ್ತು ಭಾವ ಚಿತ್ರ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು ಎಂದು ಸಾಂಗ್ಲಿಯಾನಾ ಅಭಿಯಾನದ ಹಿಂದಿನ ಉದ್ದೇಶವನ್ನು ವಿವರಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X