ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಘರಾಜೇಂದ್ರ ಶರಣರಿಂದ ಪರಿಶಿಷ್ಟರಿಗೆ ಲಿಂಗ ದೀಕ್ಷೆ

By Staff
|
Google Oneindia Kannada News

ಧಾರವಾಡ: ಚಿತ್ರದುರ್ಗ ಮುರುಘ ಮಠದ ಶ್ರೀ ಮುರುಘರಾಜೇಂದ್ರ ಶರಣರು ದಲಿತರಿಗೆ ಲಿಂಗ ದೀಕ್ಷೆ ನೀಡುವ ಅಭಿಯಾನವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಸುಮಾರು 50ಮಂದಿ ಪರಿಶಿಷ್ಟ ಜಾತಿಯ ಜನರಿಗೆ ಲಿಂಗ ದೀಕ್ಷೆ ನೀಡಿದ್ದಾರೆ.

ಇಲ್ಲಿನ ಉದ್ಯಮಿ ನಡಕಟ್ಟಿ ಅವರ ತೋಟದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗದ ಜನರಿಗೆ ಡಾ. ಎಸ್‌. ಆರ್‌. ರಾಮನಗೌಡ ಅವರು ಲಿಂಗ ದೀಕ್ಷೆ ನೀಡಿದರು. ಲಿಂಗದೀಕ್ಷೆಯನ್ನು ಕೇವಲ ಜಗದ್ಗುರು ಅಥವಾ ಜಂಗಮರಿಂದಲೇ ಪಡೆಯಬೇಕು ಎಂಬ ಸಂಪ್ರದಾಯಕ್ಕೆ ಅರ್ಥ ವಿಲ್ಲ. ಬಸವಧರ್ಮೀಯರಾದ ಲಿಂಗಾನುಭವಿಗಳು ಈ ಕಾರ್ಯಕ್ರಮಕ್ಕೆ ಅರ್ಹರು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮುರುಘರಾಜೇಂದ್ರ ಶರಣರು ಅಭಿಪ್ರಾಯಪಟ್ಟರು.

ಲಿಂಗ ದೀಕ್ಷೆ ಪಡೆದ ಪರಿಶಿಷ್ಟರು ತಾವು ದುಶ್ಚಟಗಳನ್ನು ತೊರೆಯುವುದಾಗಿ ಪ್ರತಿಜ್ಞೆ ಮಾಡಿದರು. ಶಾಸಕ ಚಂದ್ರಕಾಂತ ಬೆಲ್ಲದ, ಉಪ ಮೇಯರ್‌ ಸುನೀಲ ಪಾಟೀಲ್‌, ಜಿಲ್ಲಾ ಪಂಚಾಯತ್‌ ಸದಸ್ಯರಾದ ವಿನಯ ಕುಲ ಕರ್ಣಿ, ಸುಭಾಷ್‌ ದೇಸಾಯಿ, ಗುಲ್ಬರ್ಗ ಬಸವ ಕೇಂದ್ರದ ಸೋಮಣ್ಣ ನಡಕಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X