ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುರುಘರಾಜೇಂದ್ರ ಶರಣರಿಂದ ಪರಿಶಿಷ್ಟರಿಗೆ ಲಿಂಗ ದೀಕ್ಷೆ
ಧಾರವಾಡ: ಚಿತ್ರದುರ್ಗ ಮುರುಘ ಮಠದ ಶ್ರೀ ಮುರುಘರಾಜೇಂದ್ರ ಶರಣರು ದಲಿತರಿಗೆ ಲಿಂಗ ದೀಕ್ಷೆ ನೀಡುವ ಅಭಿಯಾನವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಸುಮಾರು 50ಮಂದಿ ಪರಿಶಿಷ್ಟ ಜಾತಿಯ ಜನರಿಗೆ ಲಿಂಗ ದೀಕ್ಷೆ ನೀಡಿದ್ದಾರೆ.
ಇಲ್ಲಿನ ಉದ್ಯಮಿ ನಡಕಟ್ಟಿ ಅವರ ತೋಟದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗದ ಜನರಿಗೆ ಡಾ. ಎಸ್. ಆರ್. ರಾಮನಗೌಡ ಅವರು ಲಿಂಗ ದೀಕ್ಷೆ ನೀಡಿದರು. ಲಿಂಗದೀಕ್ಷೆಯನ್ನು ಕೇವಲ ಜಗದ್ಗುರು ಅಥವಾ ಜಂಗಮರಿಂದಲೇ ಪಡೆಯಬೇಕು ಎಂಬ ಸಂಪ್ರದಾಯಕ್ಕೆ ಅರ್ಥ ವಿಲ್ಲ. ಬಸವಧರ್ಮೀಯರಾದ ಲಿಂಗಾನುಭವಿಗಳು ಈ ಕಾರ್ಯಕ್ರಮಕ್ಕೆ ಅರ್ಹರು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮುರುಘರಾಜೇಂದ್ರ ಶರಣರು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, January 5, 2002, 5:30 [IST]