ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರಿಗೂ ಶಿಕ್ಷಣ : ಗುಣಮಟ್ಟದಲ್ಲಿ ತಾರತಮ್ಯವೇಕೆ?

By Staff
|
Google Oneindia Kannada News

ಬೆಂಗಳೂರು : ಸರ್ವರಿಗೂ ಶಿಕ್ಷಣ ಎಂಬುದು ಸರಕಾರದ ಕೂಗು. ಪ್ರಾಥಮಿಕ ಶಿಕ್ಷಣ ಕಡ್ಡಾಯ. ಆದರೂ ಶಾಲೆ ಬಿಡುವ - ಶಾಲೆಗೆ ಸೇರದೇ ಇರುವ ಮಕ್ಕಳ ಸಂಖ್ಯೆ ಭಾರತದಲ್ಲಿ ಕಡಿಮೆ ಏನಿಲ್ಲ. ಮಕ್ಕಳನ್ನು ಶಾಲೆಯಲ್ಲೇ ಹಿಡಿದಿಡಲು ಸರಕಾರ ಹಲವು ಹತ್ತು ಯೋಜನೆಗಳನ್ನು ರೂಪಿಸಿದೆ. ಆದರೂ ಮಕ್ಕಳು ಶಾಲೆ ಬಿಡುತ್ತಾರೆ.

ಈ ಮಧ್ಯೆ ಹಲವು ಖಾಸಗಿ ಪ್ರತಿಷ್ಠಾನಗಳು - ಸ್ವಯಂ ಸೇವಾ ಸಂಸ್ಥೆಗಳು ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿವೆ. ಶಿಕ್ಷಣ ಗುಣಮಟ್ಟ ತಾರತಮ್ಯ ನಿವಾರಣೆಗಾಗಿ ಇನ್‌ಫೋಸಿಸ್‌ ಪ್ರತಿಷ್ಠಾನವೇ ಮೊದಲಾದ ಖಾಸಗಿ ಸಂಸ್ಥೆಗಳು, ಸರಕಾರಿ ಮತ್ತು ಕಾರ್ಪೊರೇಷನ್‌ ಶಾಲೆಗಳನ್ನು ದತ್ತು ಸ್ವೀಕರಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಆ ಶಾಲೆಗಳಲ್ಲೂ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತಿವೆ.

ಇಂತಹ ಒಂದು ಪುಟ್ಟ ಹೆಜ್ಜೆಯನ್ನು ಸ್ಕೂಲ್‌ನೆಟ್‌ ಫೌಂಡೇಷನ್‌ ಕೂಡ ಇಟ್ಟಿದೆ. ಮೂಲಭೂತ ಸೌಕರ್ಯಗಳ ಕೊರತೆ ಇರುವ ಶಾಲೆಗಳ ಮಕ್ಕಳಿಗೂ ಕಂಪ್ಯೂಟರ್‌ ಮೂಲಕ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸುವ ನಿರ್ಧಾರ ತಳೆದಿದೆ. ಇದಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸಲು ಜನವರಿ 6ರ ಭಾನುವಾರ ರ್ಯಾಲಿಯಾಂದನ್ನು ಆಯೋಜಿಸಿದೆ.

ಕೆಎಸ್‌ಸಿಎ ಕ್ರೀಡಾಂಗಣದ ಎದುರಿನಿಂದ ಭಾನುವಾರ ಬೆಳಗ್ಗೆ ಆರಂಭವಾಗಲಿರುವ ಮಕ್ಕಳ ರ್ಯಾಲಿಯಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ರ್ಯಾಲಿಯನ್ನು ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಉದ್ಘಾಟಿಸಲಿದ್ದಾರೆ.

ಈಗಾಗಲೇ ಸ್ಕೂಲ್‌ನೆಟ್‌ ಪ್ರತಿಷ್ಠಾನ ಇಂತಹ ರ್ಯಾಲಿಗಳನ್ನು ಮುಂಬಯಿ ಮತ್ತು ಹೈದರಾಬಾದ್‌ನಲ್ಲಿ ನಡೆಸಿದೆ. ಈ ರ್ಯಾಲಿಗಳಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಸಂಪನ್ಮೂಲ ಕ್ರೋಡೀಕರಣದ ಬಳಿಕ ಸೂಕ್ತ ಶೈಕ್ಷಣಿಕ ಸೌಲಭ್ಯಗಳಿಲ್ಲದ ಶಾಲೆಗಳನ್ನು ಗುರುತಿಸಿ, ಸರ್ವರಿಗೂ ಶಿಕ್ಷಣ ಯೋಜನೆಯಡಿ ನೆರವು ನೀಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X