ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ, ದ.ಕ, ಹಾವೇರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಹಾಗೂ ಹಾವೇರಿ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾನುವಾರ ಮಧ್ಯಾಹ್ನ 1ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದ ವರದಿಗಳು ರಾಜ್ಯದ ರಾಜಧಾನಿಯನ್ನು ತಲುಪಿವೆ.
ಮಧ್ಯಾಹ್ನ 1 ಗಂಟೆವರೆಗೆ ಸುಳ್ಯದಲ್ಲಿ ಶೇ.50, ಉಳ್ಳಾಲದಲ್ಲಿ ಶೇ.27ರಷ್ಟು, ಹಿರೇಕೆರೂರಿನಲ್ಲಿ ಶೇ.50ರಷ್ಟು, ಕಾರ್ಕಳದಲ್ಲಿ ಶೇ.45ರಷ್ಟು ಹಾಗೂ ಕುಂದಾಪುರದಲ್ಲಿ ಶೇ. 55ರಷ್ಟು ಮತದಾನ ನಡೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಈ ಮಧ್ಯೆ ಶಾಸಕ ಸದಾನಂದಗೌಡ ಅವರು, ಮತಚಲಾಯಿಸಲು ಮತಗಟ್ಟೆಗೆ ಬಂದಾಗ, ಮತ್ತೊಂದು ವಾರ್ಡ್ನಲ್ಲಿ ಅವರ ಹೆಸರು ನಮೂದಾಗಿದೆ ಎಂದು ಮತದಾನಕ್ಕೆ ಅವಕಾಶ ನಿರಾಕರಿಸಲಾಯಿತು. ತಮ್ಮ ಹಕ್ಕು ಚಲಾಯಿಸಲು ಶಾಸಕರು ಮಧ್ಯಾಹ್ನದವರೆಗೂ ಕಾದು ಕುಳಿತಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Sunday, November 11, 2001, 5:30 [IST]