ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜಾಪುರದಿ ಮಿಡಿದ ಮುಗಿಲು ವೀಣೆಯ ಮಧುರ ಆಲಾಪ
ಬಿಜಾಪುರ, ನ. 10 : ಕವಿ ನರಸಿಂಹ ಪರಾಂಜಪೆ ಅವರ 'ಮುಗಿಲು ವೀಣೆಯ ಮಧುರ ಆಲಾಪ' ಕವನ ಸಂಕಲನ ಪುಸ್ತಕವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಾನಪ್ಪ ಜಟ್ಟಿ ಬಿಡುಗಡೆ ಮಾಡಿದರು.
ಮಕ್ಕಳ ಸಾಹಿತಿ ಬಿರಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಂಜಪೆಯವರ ಕಾಲು ಶತಕ ಕಾವ್ಯ ಕೃಷಿ ಎಂಬ ಪುಸ್ತಕದ ಬಗ್ಗೆ ಸಾಹಿತಿ ಸಿದ್ಧರಾಜ್ ಪೂಜಾರಿ ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿರಾದರ್ ಅವರಿಗೆ ಶಿಶು ಸಾಹಿತ್ಯ ಶಿಲ್ಪಿ ಬಿರುದು ನೀಡಿ ಸನ್ಮಾನಿಸಲಾಯಿತು.
ಪರಂಜಪೆ
ಅವರಿಗೂ
ಕವಿಭೂಷಣ
ಬಿರುದು
ನೀಡಿ
ಗೌರವಿಸಲಾಯಿತು.
ನಂತರ
ಪರಂಜಪೆ
ಅವರು
ಎಂಟು
ಕವನಗಳನ್ನು
ವಾಚಿಸಿದರು.
ಆಕಾಶವಾಣಿ
ಕಲಾವಿದೆ
ಮಥುರಾ
ದೀಕ್ಷಿತ್
ಅವರ
ಗಾಯನ
ಗೋಷ್ಠಿಯನ್ನು
ಕಾರ್ಯಕ್ರಮದ
ನಂತರ
ಏರ್ಪಡಿಸಲಾಗಿತ್ತು.
English summary
Kannada poet Narasimha Paranjape's poetry collection 'Mugilu Veeneya Madhura Aalapa' was released in Bijapur by district Kannada Sahitya Parishat president Danappa Jatti. Paranjape was accorded 'Kavi Bhushana' title.
Story first published: Thursday, November 10, 2011, 11:41 [IST]