ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿಯಲ್ಲಿ ಅ.13ರಿಂದ ಇತಿಹಾಸ ಅಕಾಡಮಿ ಅಧಿವೇಶನ
ಬೆಂಗಳೂರು : ಕರ್ನಾಟಕ ಇತಿಹಾಸ ಅಕಾಡಮಿಯ 15ನೇ ವಾರ್ಷಿಕ ಅಧಿವೇಶನ ಅಕ್ಟೋಬರ್ 13ರಿಂದ ಉಡುಪಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಹಾಗೂ ಹೆಸರಾಂತ ಸಂಶೋಧಕಿ ಡಾ. ಜೋತ್ಸ್ನಾಕಾಮತ್ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು ಅಧಿವೇಶವನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹೆಸರಾಂತ ಶಾಸನಶಾಸ್ತ್ರಜ್ಞ ಡಾ. ಕೆ.ವಿ. ರಮೇಶ್ ಅವರಿಗೆ ಹೊಸದಾಗಿ ಸ್ಥಾಪಿಸಲಾಗಿರುವ ಡಾ. ಬಿ.ಆರ್. ಗೋಪಾಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಅಧಿವೇಶನದಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು ಎಂದು ಅಕಾಡಮಿ ಪ್ರಕಟಣೆ ತಿಳಿಸಿದೆ.
(ಪಿ.ಟಿ.ಐ)
Comments
Story first published: Wednesday, October 10, 2001, 5:30 [IST]