ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ.20 ರಂದು ಬಲರಾಮನೊಂದಿಗೆ ಐದು ಆನೆಗಳು ಮೈಸೂರಿಗೆ
ಮೈಸೂರು : ಅಕ್ಟೋಬರ್ನಲ್ಲಿ ನಡೆಯುವ ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಆನೆಗಳ ಮೊದಲ ತಂಡ ಗುರುವಾರ (ಸೆ.20) ದಂದು ಇಲ್ಲಿಗೆ ಆಗಮಿಸಲಿವೆ. ಅಂಬಾರಿಯನ್ನು ಹೊರುವ ಬಲರಾಮನ ಜೊತೆ ಇತರ 5 ಆನೆಗಳು ಅಂದು ಆಗಮಿಸಲಿವೆ.
ಬಲರಾಮ, ಭರತ, ಗಜೇಂದ್ರ, ಅರ್ಜುನ ಹಾಗೂ ಎರಡು ಹೆಣ್ಣಾನೆಗಳು ಗುರುವಾರ ಮೈಸೂರಿಗೆ ಆಗಮಿಸಲಿದ್ದು, ಅವುಗಳಿಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು ಎಂದು ಹುಣಸೂರು ಅರಣ್ಯ ಉಪ ಸಂರಕ್ಷಣಾಧಕಾರಿ ಅಣ್ಣಯ್ಯ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಬಲರಾಮನೊಂದಿಗೆ ಅರ್ಜುನನಿಗೆ ಕೂಡ ಅಂಬಾರಿಯನ್ನು (850 ಕೆಜಿಯ ಚಿನ್ನದ ಅಂಬಾರಿ) ಹೊರುವ ತರಬೇತಿ ನೀಡಲಾಗುವುದು ಎಂದು ಅಣ್ಣಯ್ಯ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, September 18, 2001, 5:30 [IST]