ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ : 36 ಗಂಟೆಯಲ್ಲಿ ಜೋಡಿ ಕೊಲೆ ಆರೋಪಿಯ ಬಂಧನ

By Staff
|
Google Oneindia Kannada News

ದಾವಣಗೆರೆ : ದಾವಣಗೆರೆ ಹೊರವಲಯದ ಶ್ಯಾಮನೂರಿನ ನಿವೃತ್ತ ಶಿಕ್ಷಕ ದಿವಂಗತ ಜಯದೇವಯ್ಯ ಅವರ ಪತ್ನಿ ಹಾಗೂ ಪುತ್ರಿಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಾದ 36 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಹತ್ಯೆಗೀಡಾದ ಕೊಟ್ರಮ್ಮ ಅವರ ತಂಗಿಯ ಮಗ ವಿರುಪಾಕ್ಷ ಎಂಬಾತ ಈ ಕೊಲೆಯನ್ನು ಮಾಡಿದ್ದಾಗಿ ತಿಳಿಸಿರುವ ಪೊಲೀಸರು, ಆತನನ್ನು ಬಂಧಿಸಿ, ಆತ ದೋಚಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸ್ತವವಾಗಿ ಕೊಲೆ ಸೆಪ್ಟೆಂಬರ್‌ ನಾಲ್ಕರಂದೆ ನಡೆದಿದ್ದರೂ ಕೂಡ ಹೊರಗಡೆಯಿಂದ ಮನೆಗೆ ಬೀಗ ಹಾಕಿದ್ದ ಕಾರಣ ಕೊಲೆ ಪ್ರಕರಣ ವರದಿಯಾಗಿದ್ದು ಸೆ.6ರಂದು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ತಮಗೆ ದೊರೆತ ಸುಳಿವಿನ ಮೇರೆಗೆ ಆರೋಪಿಯನ್ನು ಸೆಪ್ಟೆಂಬರ್‌ 7ರಂದು ರಾತ್ರಿ 8 ಗಂಟೆಗೆ ಬಂಧಿಸಿದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ನಡುಮನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X