ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರೆ ಹತ್ತಿರ ಬಂತು, ಎಲ್ಲಿ ಹೋದೆಯೋ ಗಜರಾಜ ಬಲರಾಮ!

By Staff
|
Google Oneindia Kannada News

ಮೈಸೂರು : ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ದಸರೆಯ ಕೇಂದ್ರ ಆಕರ್ಷಣೆಯಾಗಿ ಮೆರೆಯುತ್ತಿದ್ದ ಆನೆ ಬಲರಾಮ ನಾಗರಹೊಳೆಯ ಕಳ್ಳಾಲ ಕ್ಯಾಂಪ್‌ನಿಂದ ಕಾಣೆಯಾಗಿದ್ದಾನೆ!

ನಾಲ್ಕು ದಿನಗಳಿಂದ ಕಾಣೆಯಾಗಿರುವ ಬಲರಾಮನನ್ನು ಪತ್ತೆ ಹಚ್ಚಲು ಅರಣ್ಯ ಸಿಬ್ಬಂದಿ ತೀವ್ರ ಶೋಧ ನಡೆಸಿದೆ. ಎಂದಿನಂತೆ 12 ಮಂದಿ ಸಂಗಡಿಗರೊಂದಿಗೆ ಅಡ್ಡಾಡಲೂ ಬಲರಾಮ ತೆರಳಿದ್ದ . 12 ಮಂದಿ ವಾಪಸ್ಸಾದರೂ ಬಲರಾಮ ಮಾತ್ರ ಕ್ಯಾಂಪ್‌ಗೆ ವಾಪಸ್ಸಾಗದಿದ್ದಾಗ ಗಾಬರಿಗೊಳ್ಳುವ ಸರದಿ ಬಲರಾಮನದ್ದು . ಬಲರಾಮ ಸಂಗಾತಿಯನ್ನು ಹುಡುಕಿಕೊಂಡು ಹೋಗಿರಬಹುದೇ? ಈ ಗುಮಾನಿ ತಳ್ಳಿ ಹಾಕಲಾಗದು ಎನ್ನುತ್ತದೆ ಅರಣ್ಯ ಸಿಬ್ಬಂದಿ ವಲಯ.

ಕಳೆದ ಎರಡು ವರ್ಷಗಳಿಂದ ಅಂಬಾರಿ ಹೊರುತ್ತಿರುವ ಬಲರಾಮ, ಈ ಬಾರಿಯೂ ಅಂಬಾರಿ ಹೊರಬೇಕಾಗಿದೆ. ಅಲ್ಲದೆ, ರಾಜ ಗಾಂಭೀರ್ಯಕ್ಕೆ ಹೆಸರಾದ ಬಲರಾಮನನ್ನು ಹೊರತುಪಡಿಸಿ ಇತರ ಯಾವುದೇ ಆನೆ ಅಂಬಾರಿಯನ್ನು ಹೊರುವ ತರಬೇತಿ ಪಡೆದಿಲ್ಲ . ಅಂದಹಾಗೆ, ಅಕ್ಟೋಬರ್‌ 17 ರಿಂದ ದಸರಾ ಉತ್ಸವ ಪ್ರಾರಂಭವಾಗುತ್ತದೆ.

ಬಲರಾಮನಿಗಿಂತ ಮುನ್ನ ದ್ರೋಣ ಹೆಸರಿನ ಆನೆ ಅಂಬಾರಿಯನ್ನು ಹೊರುತ್ತಿತ್ತು . ಸುಮಾರು ಎರಡು ವರ್ಷಗಳ ಹಿಂದೆ ವಿದ್ಯುತ್‌ ತಂತಿಗೆ ಸಿಲುಕಿ ದ್ರೋಣ ಪ್ರಾಣ ಕಳೆದುಕೊಂಡಿದ್ದರಿಂದ ಅಂಬಾರಿ ಹೊರುವ ಕರ್ತವ್ಯ ಬಲರಾಮನಿಗೆ ವರ್ಗಾವಣೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X