ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಲ್ಲೇಶ್ವರಂನ ವೇಣುಗೋಪಾಲನಿಗೆ ಸಹಸ್ರ ಕಲಶಾಭಿಷೇಕ
ಬೆಂಗಳೂರು : ಶ್ರಾವಣ ಬಹುಳ ಚತುರ್ಥಿ ಅರ್ಥಾತ್ ಆಗಸ್ಟ್ 8ರ ಬುಧವಾರ ನಗರದ ಮಲ್ಲೇಶ್ವರಂ ಬಡಾವಣೆಯ 11ನೇ ಕ್ರಾಸಿನಲ್ಲಿ ಕಣ್ಣಾಡಿಸಿದಷ್ಟೂ ಜನ. ಧ್ವನಿವರ್ಧಕಗಳಿಂದ ಹೊಮ್ಮಿದ ಮಂತ್ರಘೋಷ ಗಗನ ಮುಟ್ಟಿತು. ಎಲ್ಲಾ ವೇಣುಗೋಪಾಲ ಸ್ವಾಮಿಯ ಮಹಿಮೆ. 1008 ಕಲಶಗಳನ್ನಿಟ್ಟು , ಸಹಸ್ರ ಕಲಶಾಭಿಷೇಕ ಮಾಡಲಾಯಿತು.
ಶ್ರಾವಣ ಬಹುಳದ ಜೊತೆಗೆ ಉತ್ತರಾಭಾದ್ರ ನಕ್ಷತ್ರವೂ ಬರುವ ಈ ದಿನ ನಗರದ ಪ್ರಾಚೀನ ದೇವಾಲಯಗಳಲ್ಲೊಂದಾದ ವೇಣುಗೋಪಾಲ ಸ್ವಾಮಿಗೆ ಭಕ್ತರು ಜೋರೋ ಜೋರು. ಕಳೆದ ಸೋಮವಾರ ಪ್ರಾರಂಭವಾದ ನಾಲ್ಕು ದಿನಗಳ ಪ್ರತಿಷ್ಠಾಪನಾ ಆಚರಣೆಗಳ ಪೈಕಿ ಬುಧವಾರದ ಕಲಶಾಭಿಷೇಕ ಪ್ರಮುಖ ಆಕರ್ಷಣೆಯಾಗಿತ್ತು. ಮುಂಜಾನೆ 7 ಗಂಟೆಗೆ ಪೂಜಾವಿಧಿಗಳೊಂದಿಗೆ ಪ್ರಾರಂಭವಾದ ಆಚರಣೆ ನೋಡಲು ಅಸಂಖ್ಯಾತ ಭಕ್ತರು ನೆರೆದಿದ್ದರು. ಪೂಜಾ ಕಾರ್ಯ ಮಾತ್ರವಲ್ಲದೆ ಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜನರ ಆಕರ್ಷಣೆಯ ಕೇಂದ್ರವಾಗಿವೆ.
ಶ್ರೀವಾರಿ ಕಲ್ಯಾಣೋತ್ಸವ ಹಾಗೂ ಪುಷ್ಪ ಮಂಟಪ ಉತ್ಸವಗಳೊಂದಿಗೆ 4 ದಿನಗಳ ಆಚರಣೆಗೆ ಗುರುವಾರ ತೆರೆ ಬೀಳಲಿದೆ.
(ಇನ್ಫೋ ವಾರ್ತೆ)
Comments
Story first published: Wednesday, August 8, 2001, 0:00 [IST]