ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪುಂದ ಬಳಿ ದೋಣಿ ಮಗುಚಿ ಇಬ್ಬರು ಮೀನುಗಾರರ ಸಾವು

By Staff
|
Google Oneindia Kannada News

ಬೈಂದೂರು: ಇಲ್ಲಿನ ಉಪ್ಪುಂದ ಸಮೀಪದ ಕರ್ಕಿಕಳಿ ಎಂಬಲ್ಲಿ , ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ನಡೆದಿದೆ.

‘ಮಕ್ಕಳಫಂಡು’ ಎಂಬ ಹೆಸರಿನ ತಂಡದ ಆರು ಮಂದಿ ಮೀನುಗಾರರು ದೋಣಿಯಲ್ಲಿ ಕೈರಂಪಣಿ ಬಲೆ ಬಳಸಿ ಮೀನುಗಾರಿಕೆಗೆ ಹೊರಟಿದ್ದರು. ದೋಣಿ ಮಗುಚಿದಾಗ ನಾಲ್ವರು ಈಜಿ ದಡ ಸೇರಿದರೆ, ಇಬ್ಬರು ನೀರು ಪಾಲಾದರು. ಮೃತರನ್ನು ಚುಕಣಿಮನೆ ನಾರಾಯಣ ಖಾರ್ವಿ (55), ಮತ್ತು ಜನತಾ ಕಾಲನಿಯ ಬಳ್ಕುಮನೆ ನಾಗ ಖಾರ್ವಿ (45) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್‌ ಅಚ್ಯುತ ಅವರು ದುರ್ಘಟನೆಯಲ್ಲಿ ಹಾನಿಗೀಡಾದ ದೋಣಿ ಮತ್ತು ನಾಶವಾದ ಬಲೆಗಳ ಒಟ್ಟು ನಷ್ಟ 75 ಸಾವಿರ ರೂಪಾಯಿಗಳೆಂದು ಅಂದಾಜಿಸಿದ್ದಾರೆ. ಸ್ಥಳೀಯರ ನಂಬಿಕೆ ಪ್ರಕಾರ, ಮಂಗಳವಾರ ನಡೆದ ದುರಂತದಿಂದಾಗಿ ಮಕ್ಕಳ ಫಂಡು ತಂಡ ಈ ಋತುವಿನಲ್ಲಿ ಮೀನುಗಾರಿಕೆ ಉದ್ಯೋಗ ನಡೆಸಲಾಗದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X