ಬರ‘ಗ್ರಸ್ತ’ರಿಗೆ 1 ಲಕ್ಷ ಟನ್ ಉಚಿತ ಧಾನ್ಯ ನೀಡಲು ಪ್ರಧಾನಿ ಒಪ್ಪಿಗೆ
ನವದೆಹಲಿ : ಕರ್ನಾಟಕದ ಬರ ಗ್ರಸ್ತರಿಗೆ ನೀಡಲು 1 ಲಕ್ಷ ಟನ್ ಧಾನ್ಯವನ್ನು ಉಚಿತವಾಗಿ ಬಿಡುಗಡೆ ಮಾಡುವುದಾಗಿ ಪ್ರಧಾನಿ ಎ.ಬಿ.ವಾಜಪೇಯಿ ಹೇಳಿದ್ದು, ಸದ್ಯದಲ್ಲೇ ಪ್ರಕೃತಿ ವಿಕೋಪ ನಿಧಿಯಿಂದ ಎರಡನೇ ಹಂತದ 24 ಕೋಟಿ ರುಪಾಯಿಗಳ ನೆರವನ್ನೂ ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.
‘ಅನ್ನಕ್ಕಾಗಿ ಕೆಲಸ’ ಕಾರ್ಯಕ್ರಮದಡಿ ಕೂಲಿ ರೂಪದಲ್ಲಿ ಧಾನ್ಯ ಕೊಡಲು ಪ್ರಧಾನಿ ಒಪ್ಪಿಕೊಂಡರು. ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ನಿಯೋಗ ಕರ್ನಾಟಕದಲ್ಲಿನ ಬರ ಪರಿಸ್ಥಿತಿಯನ್ನು ಬುಧವಾರ ಮನವರಿಕೆ ಮಾಡಿಕೊಟ್ಟು, ಪರಿಹಾರ ಕೋರಿದಾಗ ಪ್ರಧಾನಿ ಈ ಭರವಸೆ ಕೊಟ್ಟರು.
ಬರ ದುಸ್ಥಿತಿ ಪರಿಹಾರಕ್ಕೆ ಕರ್ನಾಟಕ ಕೇಂದ್ರವನ್ನು ಯಾಚಿಸಿದ್ದು 836 ಕೋಟಿ ರುಪಾಯಿ. ಆದರೆ, ತಕ್ಷಣಕ್ಕೆ ಪ್ರಧಾನಿ ಕೊಟ್ಟ ಭರವಸೆ ಪುಟ್ಟ ಹಿಡಿಯಷ್ಟು. ಕರ್ನಾಟಕದ ಬರ ಪರಿಸ್ಥಿತಿ ಕುರಿತು ಕೇಂದ್ರ ತಂಡ ತಮಗೆ ವರದಿ ಸಲ್ಲಿಸಿದ ನಂತರ ಹೆಚ್ಚಿನ ನೆರವು ಕೊಡುವ ಬಗ್ಗೆ ಪರಿಶೀಲಿಸುವುದಾಗಿ ವಾಜಪೇಯಿ ಹೇಳಿದರು.
ನಿಯೋಗದಲ್ಲಿ ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಅನಂತ ಕುಮಾರ್, ವಿ.ಧನಂಜಯ ಕುಮಾರ್, ಕರ್ನಾಟಕ ವಿಧಾನಸಭಾ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹಾಗೂ ರಾಜ್ಯದ ಎಲ್ಲಾ ಪಕ್ಷದ ಸಂಸದರು ಇದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ