ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್‌, ಗಂಗೂಲಿಗೆ ಭಯೋತ್ಪಾದಕರಿಂದ ಅಪಹರಣದ ಬೆದರಿಕೆ

By Staff
|
Google Oneindia Kannada News

ಮುಂಬಯಿ : ಭಾರತೀಯ ಕ್ರಿಕೆಟ್‌ನ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ಅವರನ್ನು ಅಪಹರಿಸುವುದಾಗಿ ನಿಷೇಧಿತ ಉಗ್ರಗಾಮಿಗಳ ಪಡೆ ಲಷ್ಕರ್‌- ಇ- ತೊಯಿಬಾ ಬೆದರಿಕೆ ಒಡ್ಡಿದೆ.

ಉಗ್ರಗಾಮಿ ಸಂಘಟನೆಯು ಗಂಗೂಲಿ, ತೆಂಡೂಲ್ಕರ್‌ ಮಾತ್ರವಲ್ಲದೆ ದೇಶದ ಅನೇಕ ಪ್ರಮುಖರನ್ನು ಅಪಹರಿಸುವ ಸಂಚು ರೂಪಿಸಿದ್ದು, ಅಪಹರಿಸಲು ಉದ್ದೇಶಿಸಿರುವ ಗಣ್ಯರ ಪಟ್ಟಿಯಾಂದನ್ನೇ ತಯಾರಿಸಿದೆ. ಈ ವಿಷಯವನ್ನು ಅಪರಾಧ ವಿಭಾಗದ ಡಿಸಿಪಿ ಪ್ರದೀಪ್‌ ಸಾವಂತ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಕೆಲ ತಿಂಗಳ ಹಿಂದೆ ನಿಷೇಧಿತ ಉಗ್ರಗಾಮಿ ಗುಂಪಿನ ಕೆಲವರನ್ನು ಥಾಣೆಯ ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದಾಗ ಅಪಹರಣದ ಸಂಚಿನ ವಿಷಯ ಹೊರಬಿದ್ದಿತೆಂದು ಸಾವಂತ್‌ ತಿಳಿಸಿದ್ದಾರೆ. ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಈ ಅಪಹರಣ ಸಂಚನ್ನು ಉಗ್ರಗಾಮಿ ಗುಂಪು ರೂಪಿಸಿರುವುದಾಗಿ ನಂಬಲಾಗಿದೆ.

ಧನರಾಜ್‌ ಪಿಳ್ಳೈಗೆ ಪೊಲೀಸ್‌ ರಕ್ಷಣೆ-
ಉಗ್ರಗಾಮಿಗಳಿಂದ ಅಪಹರಣ ಹಾಗೂ ಜೀವಭಯ ಬೆದರಿಕೆಯನ್ನು ಎದುರಿಸುತ್ತಿರುವ ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್‌ ಪಿಳ್ಳೈ ಅವರಿಗೆ ಮುಂಬಯಿ ಪೊಲೀಸರು 24 ತಾಸುಗಳ ಕಟ್ಟೆಚ್ಚರದ ರಕ್ಷಣೆ ನೀಡಿದ್ದಾರೆ. (ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X