ಸಚಿನ್, ಗಂಗೂಲಿಗೆ ಭಯೋತ್ಪಾದಕರಿಂದ ಅಪಹರಣದ ಬೆದರಿಕೆ
ಮುಂಬಯಿ : ಭಾರತೀಯ ಕ್ರಿಕೆಟ್ನ ಸ್ಟಾರ್ ಬ್ಯಾಟ್ಸ್ಮನ್ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅವರನ್ನು ಅಪಹರಿಸುವುದಾಗಿ ನಿಷೇಧಿತ ಉಗ್ರಗಾಮಿಗಳ ಪಡೆ ಲಷ್ಕರ್- ಇ- ತೊಯಿಬಾ ಬೆದರಿಕೆ ಒಡ್ಡಿದೆ.
ಉಗ್ರಗಾಮಿ ಸಂಘಟನೆಯು ಗಂಗೂಲಿ, ತೆಂಡೂಲ್ಕರ್ ಮಾತ್ರವಲ್ಲದೆ ದೇಶದ ಅನೇಕ ಪ್ರಮುಖರನ್ನು ಅಪಹರಿಸುವ ಸಂಚು ರೂಪಿಸಿದ್ದು, ಅಪಹರಿಸಲು ಉದ್ದೇಶಿಸಿರುವ ಗಣ್ಯರ ಪಟ್ಟಿಯಾಂದನ್ನೇ ತಯಾರಿಸಿದೆ. ಈ ವಿಷಯವನ್ನು ಅಪರಾಧ ವಿಭಾಗದ ಡಿಸಿಪಿ ಪ್ರದೀಪ್ ಸಾವಂತ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಕೆಲ ತಿಂಗಳ ಹಿಂದೆ ನಿಷೇಧಿತ ಉಗ್ರಗಾಮಿ ಗುಂಪಿನ ಕೆಲವರನ್ನು ಥಾಣೆಯ ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದಾಗ ಅಪಹರಣದ ಸಂಚಿನ ವಿಷಯ ಹೊರಬಿದ್ದಿತೆಂದು ಸಾವಂತ್ ತಿಳಿಸಿದ್ದಾರೆ. ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಈ ಅಪಹರಣ ಸಂಚನ್ನು ಉಗ್ರಗಾಮಿ ಗುಂಪು ರೂಪಿಸಿರುವುದಾಗಿ ನಂಬಲಾಗಿದೆ.
ಧನರಾಜ್
ಪಿಳ್ಳೈಗೆ
ಪೊಲೀಸ್
ರಕ್ಷಣೆ-
ಉಗ್ರಗಾಮಿಗಳಿಂದ
ಅಪಹರಣ
ಹಾಗೂ
ಜೀವಭಯ
ಬೆದರಿಕೆಯನ್ನು
ಎದುರಿಸುತ್ತಿರುವ
ಭಾರತ
ಹಾಕಿ
ತಂಡದ
ಮಾಜಿ
ನಾಯಕ
ಧನರಾಜ್
ಪಿಳ್ಳೈ
ಅವರಿಗೆ
ಮುಂಬಯಿ
ಪೊಲೀಸರು
24
ತಾಸುಗಳ
ಕಟ್ಟೆಚ್ಚರದ
ರಕ್ಷಣೆ
ನೀಡಿದ್ದಾರೆ.
(ಇನ್ಫೋ
ವಾರ್ತೆ)