ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜುಲೈ 26 ರಂದು ಕಾರ್ಗಿಲ್ ವಿಜಯದ ದ್ವಿತೀಯ ವಾರ್ಷಿಕೋತ್ಸವ
ನವದೆಹಲಿ : ಕಾರ್ಗಿಲ್ ಯುದ್ಧ ವಿಜಯದ ದ್ವಿತೀಯ ವಾರ್ಷಿಕೋತ್ಸವವನ್ನು ಜುಲೈ 26 ರಂದು ಅದ್ದೂರಿಯಾಗಿ ಆಚರಿಸಲು ರಕ್ಷಣಾ ಸಚಿವಾಲಯ ತೀರ್ಮಾನಿಸಿದೆ.
ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಭಾರತಕ್ಕೆ ಬರುವ ಸಂದರ್ಭದಲ್ಲಿ ಕಾರ್ಗಿಲ್ ವಿಜಯವನ್ನು ವೈಭವದಿಂದ ಆಚರಿಸಲು ಈ ಮುನ್ನ ಹಿಂಜರಿಯಲಾಗಿತ್ತಾದರೂ, ಪ್ರಧಾನಿಯವರ ಸಲಹೆಯ ಮೇರೆಗೆ ಆಚರಣೆ ನಡೆಸಲು ನಿರ್ಧರಿಸಲಾಗಿದೆ. ಅಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಹಾಗೂ ಪ್ರಧಾನಿ ವಾಜಪೇಯಿ ಇಂಡಿಯಾಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ ಶ್ರದ್ಧಾಂಜಲಿ ಸಲ್ಲಿಸುವರು.
ಆಚರಣೆಯ ಪ್ರಯುಕ್ತ ವಿಜಯ್ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಹಾಗೂ ಸೈನಿಕರ ಪಥ ಸಂಚಲನ ನಡೆಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
(ಇನ್ಫೋ ವಾರ್ತೆ)
Comments
Story first published: Saturday, July 7, 2001, 5:30 [IST]