ಶಿವಮೊಗ್ಗ ಸಾಹಿತ್ಯೋತ್ಸವ ಸಾಹಿತ್ಯ ದಿಗ್ಗಜರ ಸಾಲು ಭಾಷಣಗಳು
ಶಿವಮೊಗ್ಗ : ಇಲ್ಲಿನ ಶ್ರೀಗಂಧ ಸಂಘಟನೆಯು ಜೂನ್ 9ರಿಂದ 12 ರವರೆಗೆ ನಾಲ್ಕು ದಿನಗಳ ಸಾಹಿತ್ಯೋತ್ಸವವನ್ನು ಹಮ್ಮಿಕೊಂಡಿದೆ.
ಈ ಉತ್ಸವದಲ್ಲಿ ಕನ್ನಡ ಸಾಹಿತ್ಯ ದಿಗ್ಗಜರೆನಿಸಿಕೊಂಡಿರುವ ಎಸ್. ಎಲ್. ಭೈರಪ್ಪ, ಚಂದ್ರಶೇಖರ ಕಂಬಾರ, ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಮತ್ತು ಗುರುರಾಜ ಗುಡಿ ಅವರು ಭಾಗವಹಿಸಲಿದ್ದಾರೆ ಎಂದು ಆಯೋಜಕ ಹಾಗೂ ಸಂಘದ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಕುವೆಂಪು ರಂಗ ಮಂದಿರದಲ್ಲಿ ನ-ಡೆ-ಯು-ವ ಸಾಹಿತ್ಯೋತ್ಸವನ್ನು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಉದ್ಘಾಟಿಸುವ-ರು. ಸಾಹಿತ್ಯ ಯಾಕೆ ಬೇಕು ಎಂಬ ವಿಷಯದ ಬಗೆಗಿನ ಗೋಷ್ಠಿಯ ಅಧ್ಯ-ಕ್ಷ-ತೆ-ಯನ್ನು ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರು ವಹಿಸಿಕೊಂಡರೆ, ಗುರುರಾಜ ಗುಡಿ ಅವರು ಧಾರ್ಮಿಕ ಸಾಹಿತ್ಯದ ಕುರಿತು ಜೂನ್ 10ರಂದು ನಡೆ-ಯು-ವ ಗೋಷ್ಠಿ ಯ ಅಧ್ಯ-ಕ್ಷ-ತೆ ವಹಿ-ಸುತ್ತಾರೆ.
ಚಂದ್ರಶೇಖರ ಕಂಬಾರರು ಜನಪದ ಸಾಹಿತ್ಯದ ಪ್ರಸ್ತುತತೆಯನ್ನು ತಿಳಿಸುತ್ತಾರೆ. ಮಹಾಬಲೇಶ್ವರ ಭಟ್ಟ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಭಾರತೀಯ ಸಾಹಿತ್ಯದ ಕುರಿತು ಕೊನೇ ದಿನದಂದು ಎಸ್. ಎಲ್. ಭೈರಪ್ಪ ಅವರು ತೆಗೆದುಕೊಳ್ಳುವ ಗೋಷ್ಠಿಗೆ ವಾರ್ತಾ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅಧ್ಯಕ್ಷರಾಗಿರುತ್ತಾರೆ.
(ಇನ್ಫೋ ವಾರ್ತೆ)