ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಳ್ಳಂದೂರು ಕೆರೆ ಶುದ್ಧಿ ಮಾಡುವೆವುನಾವು- ಶಾಲಾ ಮಕ್ಕಳು
ಬೆಂಗಳೂರು : ಬೆಳ್ಳಂದೂರು ಕೆರೆಯಲ್ಲಿ ಇವತ್ತೂ ನೊರೆಯಾಡುತ್ತಿದೆ. ಇವತ್ತು ಕ್ಲೀನ್ ಮಾಡ್ತೀವಿ, ನಾಳೆ ಕ್ಲೀನ್ ಮಾಡ್ತೀವಿ ಅಂತ ಸರ್ಕಾರ ದಿನ ಮುಂದೂಡುತ್ತಿರುವ ಈ ಹೊತ್ತಲ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೇ ಅದನ್ನು ಶುಚಿಯಾಗಿಡುವ ಶಪಥ ಕೈಗೊಂಡಿದ್ದಾರೆ.
ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳು ಈ ದೃಢ ಸಂಕಲ್ಪ ಮಾಡಿದರು. ಶಾಲಾ ಆವರಣದಲ್ಲಿ ಕೊಳಚೆ ನೀರಿನ ಮಡಿಕೆ ಒಡೆಯುವ ಮೂಲಕ ಕೊಳೆ ತೊಳೆಯುವ ನಿರ್ಧಾರ ಸೂಚಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಜಗನ್ನಾಥ್ ಮೊದಲಾದವರು ಭಾಗವಹಿಸಿದ್ದರು. ಪರಿಸರ ಪ್ರಜ್ಞೆ ಕುರಿತಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳ ಈ ನಿರ್ಧಾರಕ್ಕೆ ಶಿಕ್ಷಕರ ಕುಮ್ಮಕ್ಕು ಇದ್ದರೂ, ಇಂಥಾ ಒಳ್ಳೆಯ ಕೆಲಸ ಮಾಡುವುದರಿಂದ ಸರ್ಕಾರದ ಭರವಸೆಗಳಿಗೇ ಕೈ ಚಾಚುತ್ತ ಕೂರುವುದು ತಪ್ಪುತ್ತದೆ. ಅಲ್ಲವಾ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, June 6, 2001, 5:30 [IST]