ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಂದೂರು ಕೆರೆ ಶುದ್ಧಿ ಮಾಡುವೆವುನಾವು- ಶಾಲಾ ಮಕ್ಕಳು

By Staff
|
Google Oneindia Kannada News

ಬೆಂಗಳೂರು : ಬೆಳ್ಳಂದೂರು ಕೆರೆಯಲ್ಲಿ ಇವತ್ತೂ ನೊರೆಯಾಡುತ್ತಿದೆ. ಇವತ್ತು ಕ್ಲೀನ್‌ ಮಾಡ್ತೀವಿ, ನಾಳೆ ಕ್ಲೀನ್‌ ಮಾಡ್ತೀವಿ ಅಂತ ಸರ್ಕಾರ ದಿನ ಮುಂದೂಡುತ್ತಿರುವ ಈ ಹೊತ್ತಲ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೇ ಅದನ್ನು ಶುಚಿಯಾಗಿಡುವ ಶಪಥ ಕೈಗೊಂಡಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ವಿದ್ಯಾರ್ಥಿಗಳು ಈ ದೃಢ ಸಂಕಲ್ಪ ಮಾಡಿದರು. ಶಾಲಾ ಆವರಣದಲ್ಲಿ ಕೊಳಚೆ ನೀರಿನ ಮಡಿಕೆ ಒಡೆಯುವ ಮೂಲಕ ಕೊಳೆ ತೊಳೆಯುವ ನಿರ್ಧಾರ ಸೂಚಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಜಗನ್ನಾಥ್‌ ಮೊದಲಾದವರು ಭಾಗವಹಿಸಿದ್ದರು. ಪರಿಸರ ಪ್ರಜ್ಞೆ ಕುರಿತಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳ ಈ ನಿರ್ಧಾರಕ್ಕೆ ಶಿಕ್ಷಕರ ಕುಮ್ಮಕ್ಕು ಇದ್ದರೂ, ಇಂಥಾ ಒಳ್ಳೆಯ ಕೆಲಸ ಮಾಡುವುದರಿಂದ ಸರ್ಕಾರದ ಭರವಸೆಗಳಿಗೇ ಕೈ ಚಾಚುತ್ತ ಕೂರುವುದು ತಪ್ಪುತ್ತದೆ. ಅಲ್ಲವಾ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X