ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ತುಂಬ ದಿನದಿಂದ ಅಲ್ಲೋಲ ಕಲ್ಲೋಲವಾಗಿದ್ದ ಮನಸ್ಸಿಗೆ ಇವತ್ತು ಒಂದಿಷ್ಟು ತಂಪೆರೆಯುವ ಸುದ್ದಿ ಬರಲಿದೆ. ಹಾಗೇ ಕೆಲಸ ಕಾರ್ಯಗಳಲ್ಲೂ ಯಾವುದೇ ಕುಂಠಿತ ಇರುವುದಿಲ್ಲ.

ವೃಷಭ : ಮನೆ ಕೆಲಸಗಳೆಲ್ಲ ಸಸೂತ್ರವಾಗಿ ನಡೆಯುತ್ತದಾದರೂ, ಹಣದ ಅಡಚಣೆ ಆಗಾಗ ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತದೆ.

ಮಿಥುನ : ಮನೆ ಕಡೆಯಿಂದ ಕೇಳುವ ಶುಭ ವಾರ್ತೆ ನಿಮ್ಮನ್ನು ಖುಷಿಯಾಗಿರಿಸುತ್ತದೆ . ಹಾಗೇ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಬೇಡ.

ಕಟಕ : ಇವತ್ತು ಒಳ್ಳೇ ದಿನ. ಬಹು ದಿನಗಳಿಂದ ನೀವು ಆಸೆ ಪಟ್ಟಿದ್ದ ಯೋಜನೆ ಕೈಗೂಡುತ್ತದೆ. ಅದು ಎಷ್ಟೇ ಸಣ್ಣದಾಗಿರಬಹುದು. ಆದರೆ ನೆಮ್ಮದಿ ತರುವಂತಹುದು.

ಸಿಂಹ : ಎಲ್ಲ ವಿಷಯಗಳನ್ನೂ, ಕನಸುಗಳನ್ನು ತೀವ್ರವಾಗಿ ಹಚ್ಚಿಕೊಂಡು ನೀವು ಕೊರಗಲಾರಂಭಿಸುತ್ತೀರಿ. ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ತುಸು ರಿಲ್ಯಾಕ್ಸ್‌ ನೀಡಬಹುದು.

ಕನ್ಯಾ : ಇವತ್ತು ನಿಮಗೊಂದು ಸುಂದರ ಅಫರ್‌ ಬರಲಿದೆ. ಅದು ಬಾಳ ಸಂಗಾತಿಯಾಗಿ ! ತೀರಾ ಆಸಕ್ತಿ ಇಲ್ಲದಿದ್ದರೆ ಸರಿ.

ತುಲಾ : ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಇವತ್ತು ಭೇಟಿಯಾಗುವ ಹೊಸ ಸ್ನೇಹಿತರು ನಿಮಗೆ ತೀರಾ ಹತ್ತಿರದವರಾಗುತ್ತಾರೆ. ಆದ್ದರಿಂದ ಸುಮ್ಮನೇ ಸಂಶಯ ಬೇಡ.

ವೃಶ್ಚಿಕ : ಮನಸ್ಸು ಮಾಡಿದರೆ ಇವತ್ತು ಧನಲಕ್ಷ್ಮೀ ನಿಮ್ಮತ್ತ ಹರಿದು ಬರಲಿದ್ದಾಳೆ. ಕರೆಸಿಕೊಳ್ಳುವ ಅಥವಾ ಸುಮ್ಮನಿರುವ ನಿರ್ಧಾರ ನಿಮಗೆ ಬಿಟ್ಟದ್ದು.

ಧನಸ್ಸು : ತೀರಾ ಕೋಪ ಬಂದಾಗ ಜಗಳವಾಡಿಯಾಗಿದೆ. ಈಗ ಮತ್ತೆ ಸಂಬಂಧ ಶುರು ಹಚ್ಚಿಕೊಳ್ಳಬೇಕೆನಿಸಿದರೆ ಕಾಲ ಪಕ್ವವಾಗಿಲ್ಲವಲ್ಲಾ ?

ಮಕರ : ತುಂಬಾ ದಿನ ಬಾಳಿಕೆ ಬಾರದ ಯೋಜನೆಗಳನ್ನು, ಪ್ರೊಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸು ಬೇಡ. ಬಾಕಿ ಇರುವ ಕೆಲಸಗಳು ನಿಮಗಾಗಿ ಕಾಯುತ್ತಿವೆ.

ಕುಂಭ : ಆತಂಕದಿಂದಲೇ ವೃತ್ತಿ ಕ್ಷೇತ್ರ ಪ್ರವೇಶಿಸುವ ನೀವು ಇವತ್ತು ಹೊಸ ಕನಸುಗಳನ್ನು ಹೊತ್ತು ಮನೆಗೆ ಮರಳಲಿದ್ದೀರಿ. ಆಲ್‌ ದ ಬೆಸ್ಟ್‌.

ಮೀನ : ಆರೋಗ್ಯದತ್ತ ಹೆಚ್ಚು ಗಮನಕೊಡಬೇಕಾಗಿರುವುದು ಅಗತ್ಯ. ಈಗಾಗಲೇ ಮಾಡಿಕೊಂಡ ಲಾಸ್‌ ಜಾಸ್ತಿಯಾಗಿದೆ ಅಲ್ಲವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X