ಬೀದರ್ ಬಳಿ ಭೀಕರ ಅಪಘಾತ, 6 ಸಾವು, ಐವರಿಗೆ ಗಾಯ
ಬೀದರ್ : ಜಿಲ್ಲೆಯ ಮನ್ನಾ ಎಖ್ಖೆಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಮೃತರಾಗಿದ್ದು , ಇತರ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮನ್ನಾ ಎಖ್ಖೆಳ್ಳಿಯಿಂದ ಪ್ರಯಾಣಿಕರನ್ನು ತುಂಬಿಕೊಂಡು ಹುಮ್ನಾಬಾದ್ಗೆ ತೆರಳುತ್ತಿದ್ದ ಜೀಪ್ ಹೈದ್ರಾಬಾದ್ ಕಡೆಯಿಂದ ಹುಮ್ನಾಬಾದ್ಗೆ ತೆರಳುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ಎದುರಿನಿಂದ ಬಂದ ಆಂಧ್ರ ಸಾರಿಗೆ ಬಸ್ಗೆ ಢಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ಸತ್ತವರನ್ನು ಮುನ್ನಾಬಿ ಅಜಿಮೋದ್ದಿನ್- ಮನ್ನಾ ಎಖ್ಖೆಳ್ಳಿ(50), ಶಮೀಮ ಬೇಗಂ ಚಾಂದಪಾಶಾ- ಹೈದರಾಬಾದ್ (38), ಸುಜಾತಾ ಶಂಕರ- ಕರಕನನಳ್ಳಿ(22), ಸುನಿತಾ ಈಶ್ವರ- ಬಸವಕಲ್ಯಾಣ(28), ರಿಗ್ಗಿಸ್ ಈಶ್ವರ -ಬಸವಕಲ್ಯಾಣ (9) ಹಾಗೂ ಅಕ್ರಂ ಅಬ್ದುಲ್ ಸತ್ತಾರ (19) ಎಂದು ಸತ್ತವರನ್ನು ಗುರ್ತಿಸಲಾಗಿದೆ. ಗಾಯಾಳುಗಳನ್ನು ಬೀದರ್ ಹಾಗೂ ಮನ್ನಾ ಎಖ್ಖೆಳ್ಳಿಯಿಂದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
(ಇನ್ಫೋ ವಾರ್ತೆ)