ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಟಿಎಫ್‌ ಗುಂಡಿನ ದಾಳಿಗೆ ವೀರಪ್ಪನ್‌ ಸಹಚರನ ಬಲಿ ?

By Staff
|
Google Oneindia Kannada News

ಬೆಂಗಳೂರು : ವೀರಪ್ಪನ್‌ ಸಹಚರರೊಂದಿಗೆ ನೇರ ಗುಂಡಿನ ಚಕಮಕಿ ನಡೆಸಿರುವ ತಮಿಳುನಾಡು ಪೊಲೀಸರು, ಓರ್ವ ವೀರಪ್ಪನ್‌ ಸಹಚರನನ್ನು ಬಂಧಿಸಿದ್ದಾರೆಂದು ಚೆನ್ನೈ ವರದಿಗಳು ತಿಳಿಸಿವೆ. ವೀರಪ್ಪನ್‌ನ ಮತ್ತೊಬ್ಬ ಸಹಚರ ಗುಂಡಿನ ದಾಳಿಯಲ್ಲಿ ಸತ್ತಿದ್ದಾನೆಂದು ನಂಬಲಾಗಿದೆ ಎಂದು ವರದಿಗಳು ತಿಳಿಸಿವೆ.

ಗುಂಡಿನ ದಾಳಿಯಲ್ಲಿ ವೀರಪ್ಪನ್‌ನ ಮತ್ತೊಬ್ಬ ಸಹಚರ ಗಾಯಗೊಂಡಿದ್ದಾನೆ. ಕೊಯಮತ್ತೂರು ಹಾಗೂ ಸಂಬಂಧಿಕ್ಕಡು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಸುಮಾರು 15 ಜನರಿದ್ದ ತಂಡದ ಮೇಲೆ ಎಸ್‌ಟಿಎಫ್‌ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಈ ಯಶಸ್ಸು ದೊರೆತಿದೆ.

ಸಂಬಂಧಿಕ್ಕಡು ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ಅವಿತುಕೊಂಡಿದ್ದಾನೆನ್ನುವ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ನಡೆಸಿದ ತೀವ್ರ ಶೋಧನೆಯಲ್ಲಿ ವೀರಪ್ಪನ್‌ ಸಹಚರರ ತಂಡ ಪೊಲೀಸರ ಕಣ್ಣಿಗೆ ಬಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಮೇಲೆ ವೀರಪ್ಪನ್‌ ಸಹಚರರು ಬಾಂಬ್‌ಗಳನ್ನು ಎಸೆದರು ಎಂದು ವರದಿಗಳು ತಿಳಿಸಿವೆ. ಪೊಲೀಸರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಕ್ಷಣದ ವರದಿಗಳು ತಿಳಿಸಿವೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X