ಕೆನರಾ ಬ್ಯಾಂಕ್ : ಮರಳಿ ವೈಭವ ಕಾಣಲು ಶ್ರಮಿಸಲು ನೌಕರರಿಗೆ ಕರೆ
ಬೆಂಗಳೂರು : ದೇಶದ ಅತ್ಯಂತ ಪ್ರಬಲ ಬ್ಯಾಂಕ್ ಅನ್ನಿಸಿಕೊಳ್ಳಲು ಕೆನರಾಬ್ಯಾಂಕ್ ಸ್ಪರ್ಧಾಯುಗಕ್ಕೆ ತಕ್ಕನಾದ ವಾತಾವರಣವನ್ನು ತನ್ನಲ್ಲಿ ರೂಢಿಸಿಕೊಳ್ಳಬೇಕು ಎಂದು ಕೆನರಾಬ್ಯಾಂಕ್ನ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಆರ್.ಜೆ. ಕಾಮತ್ ಹೇಳಿದ್ದಾರೆ.
ಹೊಸ ವರ್ಷದ ಮೊದಲ ದಿನ ಬ್ಯಾಂಕ್ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೆಲವು ಅಡೆತಡೆಗಳ ನಡುವೆಯೂ ಬ್ಯಾಂಕ್ 80 ಸಾವಿರ ಕೋಟಿ ರುಪಾಯಿಗಳ ವಾರ್ಷಿಕ ವಹಿವಾಟು ಸಾಧಿಸಿದೆ. ಈ ಮೊತ್ತವನ್ನು 1 ಲಕ್ಷ ಕೋಟಿ ರುಪಾಯಿಗೆ ಮುಟ್ಟಿಸುವ ಗುರಿಯನ್ನು ಪ್ರಸ್ತುತ ಹೊಂದಲಾಗಿದೆ ಎಂದರು.
ಬ್ಯಾಂಕ್ನ ಪ್ರಗತಿಯ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಸವಾಲನ್ನು ಸ್ವೀಕರಿಸುವಂತೆ ಹಾಗೂ ಅರ್ಪಣಾ ಸೇವಾ ಮನೆಭಾವ ಅಳವಡಿಸಿಕೊಳ್ಳಲು ಉದ್ಯೋಗಿಗಳಿಗೆ ಕಾಮತ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ನೌಕರರ ಸಂಘದ ಮುಖ್ಯ ಕಾರ್ಯದರ್ಶಿ ಹಾಗೂ ನಿರ್ದೇಶಕ ಶಶಿಕಾಂತ್ ಅವರು, ಕೆನರಾ ಬ್ಯಾಂಕ್ ಮತ್ತೆ ತನ್ನ ವೈಭವವನ್ನು ವಾಪಸ್ಸು ಪಡೆಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಈಗಲೂ ಕೆನರಾಬ್ಯಾಂಕ್ ಸಶಕ್ತ ಸಂಸ್ಥೆಯಾಗಿದ್ದು , ಇತರ ಯಾವುದೇ ಬ್ಯಾಂಕ್ ಅಥವಾ ಸಂಸ್ಥೆಯಾಂದಿಗೆ ಇದರ ವಿಲೀನವನ್ನು ತಾವು ವಿರೋಧಿಸುವುದಾಗಿ ಅವರು ತಿಳಿಸಿದರು.
(ಯುಎನ್ಐ)