ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಎಸ್ಎಫ್ ಪ್ಲಸ್ ಎಸ್ಟಿಎಫ್ನಿಂದ ವೀರಪ್ಪನ್ ಶಿಕಾರಿ ಪ್ರಾರಂಭ
ಸೇಲಂ : ಬಿಎಸ್ಎಫ್ ಹಾಗೂ ಉಭಯ ರಾಜ್ಯಗಳ ಎಸ್ಟಿಎಫ್ ಪಡೆಗಳ ವೀರಪ್ಪನ್ ಶಿಕಾರಿಯ ಜಂಟಿ ಕಾರ್ಯಾಚರಣೆ ಸತ್ಯಮಂಗಲಂ ಮತ್ತು ಬರಗೂರು ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ಪ್ರಾರಂಭವಾಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಸುಮಾರು 800 ಗಡಿಭದ್ರತಾ ಪಡೆಯ ಜವಾನರು ವೀರಪ್ಪನ್ ಹೆಜ್ಜೆಗಳನ್ನು ಗುರ್ತಿಸುವ ಪ್ರಯತ್ನದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಬರಗೂರು, ಸತ್ಯಮಂಗಲಂ, ಕೊಳತ್ತೂರು ಹಾಗೂ ಹಂತಿಯೂರು ಅರಣ್ಯ ಪ್ರದೇಶಗಳಲ್ಲಿ ಹಳ್ಳಿಗರ ಎಲ್ಲಾ ರೀತಿಯ ಚಟುವಟಿಕೆಗಳನ್ನು ಪೊಲೀಸರು ನಿಷೇಧಿಸಿದ್ದಾರೆ. ಅರಣ್ಯದಲ್ಲಿ ಪ್ರವೇಶಿಸಲು ದನಗಾಹಿಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದ್ದು, ಯಾವುದೇ ಅನಾಹುತಗಳಿಗೆ ಅವಕಾಶ ಮಾಡಿಕೊಡದಂತೆ ಕಟ್ಟೆಚ್ಚರದಿಂದಿರಲು ಪೊಲೀಸರಿಗೆ ಸೂಚಿಸಲಾಗಿದೆ.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ
Comments
Story first published: Sunday, December 24, 2000, 5:30 [IST]