ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಕುಮಾರ್ ಮಹಾನ್ ವ್ಯಕ್ತಿ : ಅಕ್ಕಿನೇನಿ ನಾಗೇಶ್ವರ ರಾವ್
ಬೆಂಗಳೂರು : ತೆಲುಗು ಚಿತ್ರರಂಗದ ದೊಡ್ಡಣ್ಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರ ರಾವ್, ರಾಜ್ಕುಮಾರ್ ಅವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ರಾಜ್ರೊಂದಿಗೆ ಕೆಲಕಾಲ ಕಳೆದ ನಾಗೇಶ್ವರ ರಾವ್ ಅವರು ವರನಟನ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ ಬಿಡುಗಡೆಯಿಂದ ತಮ್ಮ ಮನಸ್ಸಿಗೆ ಅಪಾರ ಸಂತೋಷವಾಗಿದೆ ಎಂದರು. ರಾಜ್ ಅವರು ವೀರಪ್ಪನ್ ಒತ್ತೆಯಾಳಾಗಿದ್ದ ಸಂದರ್ಭದಲ್ಲಿ ಕೂಡ ನಾಗೇಶ್ವರ ರಾವ್ ಅವರು ರಾಜ್ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
(ಯುಎನ್ಐ)
Comments
Story first published: Sunday, December 24, 2000, 5:30 [IST]