ಅಪಹೃತ ಬಾಲಕನ ಪತ್ತೆ ಹಚ್ಚಿದ ಪೊಲೀಸರು: ಮೂವರ ಬಂಧನ
ಬೆಂಗಳೂರು : ಬುಧವಾರ ಅಪಹರಣಕ್ಕೊಳಗಾಗಿದ್ದ ಚಿಕ್ಕಪೇಟೆಯ ಜವಳಿ ವ್ಯಾಪಾರಿ ಪುತ್ರನನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದು, ಅಪಹರಣ ಸಂಬಂಧ ಒಬ್ಬಳು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಪಹರಣಕಾರರು ಒತ್ತೆ ಹಣಕ್ಕಾಗಿ ಮಾಡಿದ ದೂರವಾಣಿ ಕರೆಯನ್ನು ಅನುಸರಿಸಿ ಹೋದ ಪೊಲೀಸರು ಮೈಸೂರು ರಸ್ತೆಯ ಮನೆಯಾಂದರಲ್ಲಿ ಬಾಲಕನನ್ನು ಶುಕ್ರವಾರ ರಾತ್ರಿ ಪತ್ತೆ ಹಚ್ಚಿದ್ದಾರೆ. ಮಗುವಿನ ಬಿಡುಗಡೆಗಾಗಿ 15 ಲಕ್ಷ ರುಪಾಯಿ ಒತ್ತೆ ಹಣದ ಬೇಡಿಕೆಯನ್ನು ಅಪಹರಣಕಾರರು ಸಲ್ಲಿಸಿದ್ದರು.
ಕಬ್ಬನ್ ಪೇಟೆಯ ನಿವಾಸಿ ಹೇಮರಾಜ್ ಅವರ ಪುತ್ರ ರಾಘವೇಂದ್ರನನ್ನು (6) ಬುಧವಾರ ಅಪಹರಿಸಲಾಗಿತ್ತು . ಅಪಹರಣಕ್ಕೊಳಗಾದ 48 ಗಂಟೆಗಳಲ್ಲಿಯೇ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚಿ ಬಾಲಕನನ್ನು ರಕ್ಷಿಸಿದ್ದಾರೆ. ಕಳೆದ ತಿಂಗಳು ದೀಪಕ್ ಎನ್ನುವ ಬಾಲಕನನ್ನು ಅಪಹರಿಸಿದ್ದ ಅಪಹರಣಕಾರರು, ಆ ಬಾಲಕನನ್ನು ಕೊಲೆ ಮಾಡಿದ್ದುದರಿಂದ ರಾಘವೇಂದ್ರನ ಅಪಹರಣ ನಗರದ ಜನತೆಯಲ್ಲಿ ಆತಂಕ ಮೂಡಿಸಿತ್ತು .
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...