ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಕರ್ನಾಟಕ ಬ್ಯಾಂಕ್‌ನ ಶಾಖೆ

By Staff
|
Google Oneindia Kannada News

ಶಿವಮೊಗ್ಗಾ : ಕರ್ನಾಟಕ ಬ್ಯಾಂಕ್‌ನ 351ನೇ ಶಾಖೆಯನ್ನು ತರಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರದಂದು ಉದ್ಘಾಟಿಸಿದ-ರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಂತ ಕೃಷ್ಣ , ಬ್ಯಾಂಕ್‌ ಮತ್ತಿತರ ಆರ್ಥಿಕ ಸಂಸ್ಥೆಗಳು ಸಾರ್ವಜನಿಕರ ವಿಶ್ವಾಸದಿಂದಲೇ ಮುಂದೆ ಬಂದಿರುವುದು. ಕರ್ನಾಟಕ ಬ್ಯಾಂಕ್‌ 51 ಗ್ರಾಮೀಣ ಶಾಖೆಗಳನ್ನು ಹೊಂದಿದ್ದು, ಅತೀ ಹಿಂದುಳಿದ ಪ್ರದೇಶಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸುವ ಗುರಿ ಬ್ಯಾಂಕ್‌ ಮುಂದೆ ಇದೆ ಎಂದು ಹೇಳಿದರು.

ಕರ್ನಾಟಕ ಬ್ಯಾಂಕ್‌ ಷೇೕರು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಷೇರುದಾರರಿಗೆ ಇದರ ಉಪಯೋಗ ಪಡೆದುಕೊಳ್ಳುವಂತೆ ಅನಂತ ಕೃಷ್ಣಯ್ಯ ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಎಂಎಲ್‌ಸಿ ಮಂಜುನಾಥ್‌, ವಕೀಲರಾದ ಟಿ. ವೆಂಕಟರಾಮ್‌ ಶಾಸ್ತ್ರಿ ಭಾಗವ-ಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X