ನಾಕ್ಔಟ್ನಲ್ಲಿ ಆಡುತ್ತಿರುವ ಭಾರತ ತಂಡವೇ ಶಾರ್ಜಾದಲ್ಲೂ ಆಡಲಿದೆ
ಮುಂಬೈ : ಅಕ್ಟೋಬರ್ 20ರಿಂದ ಪ್ರಾರಂಭವಾಗುವ ಶಾರ್ಜಾ ಕ್ರಿಕೆಟ್ ಟೂರ್ನಿಗೆ ಐಸಿ-ಸಿ ನಾಕ್ಔಟ್ನಲ್ಲಿ ಆಡುತ್ತಿರುವ ಭಾರತ ತಂಡವನ್ನೇ ಉಳಿಸಿಕೊಳ್ಳಲು ರಾಷ್ಟ್ರೀಯ ಆಯ್ಕೆ ಸಮಿತಿ ಸೋಮವಾರ ನಿರ್ಧರಿಸಿತು.
ಚಂದು ಬೋರ್ಡೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಭಾರತ, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳು ಟೂರ್ನಿಯಲ್ಲಿ ಸೆಣೆಸಲಿವೆ. ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ, ಒಬ್ಬ ಆಫ್ ಸ್ಪಿನ್ನರ್ ಅಗತ್ಯವಿದೆ ಎಂದು ಕ್ರಿಕೆಟ್ ಮ್ಯಾನೇಜ್ಮೆಂಟ್ ಕೇಳಿಕೊಂಡಿರುವುದಾಗಿ ಆಯ್ಕೆ ಸಮಿತಿಗೆ ಹೇಳಿದರೂ, ಆಯ್ಕೆ ಸಮಿತಿ ಅದನ್ನು ಪರಿಗಣಿಸಲಿಲ್ಲ.
ಕರ್ನಾಟಕದ ಆಲ್ರೌಂಡರ್ ವಿಜಯ್ ಭಾರದ್ವಾಜ್ ಅವರನ್ನು ಆಯ್ಕೆ ಮಾಡುವಂತೆ ಕೋರಲಾಗಿತ್ತು. ‘ಬಹುದಿನಗಳಿಂದ ಅವರು ಮೈದಾನದಿಂದ ಹೊರಗುಳಿದಿದ್ದಾರೆ. ಅವರ ದೇಹಸ್ಥಿತಿ ಹೇಗಿದೆ ಎಂಬುದರ ಬಗೆಗೆ ನಮಗೆ ಅರಿವಿಲ್ಲ. ಹೀಗಾಗಿ ನಾಕ್ಔಟ್ ಟೂರ್ನಿಯಲ್ಲಿ ಆಡುತ್ತಿರುವ ತಂಡವನ್ನೇ ಉಳಿಸಿಕೊಳ್ಳಲು ನಿರ್ಧರಿಸಿದೆವು’ ಎಂದು ಚಂದು ಬೋರ್ಡೆ ತಿಳಿಸಿದರು.
ಪಂದ್ಯಗಳು ನಡೆಯುವ ದಿನಾಂಕ
ಅಕ್ಟೋಬರ್ 20 : ಭಾರತ- ಶ್ರೀಲಂಕಾ
ಅಕ್ಟೋಬರ್ 21 : ಶ್ರೀಲಂಕಾ- ಜಿಂಬಾಬ್ವೆ
ಅಕ್ಟೋಬರ್ 22 : ಭಾರತ- ಜಿಂಬಾಬ್ವೆ
ಅಕ್ಟೋಬರ್ 23 ಮತ್ತು 24 : ವಿರಾಮ
ಅಕ್ಟೋಬರ್ 25 : ಶ್ರೀಲಂಕಾ- ಜಿಂಬಾಬ್ವೆ
ಅಕ್ಟೋಬರ್ 26 : ಭಾರತ- ಜಿಂಬಾಬ್ವೆ
ಅಕ್ಟೋಬರ್ 27 : ಭಾರತ- ಶ್ರೀಲಂಕಾ
ಅಕ್ಟೋಬರ್ 28 : ವಿರಾಮ
ಅಕ್ಟೋಬರ್ 29 : ಫೈನಲ್ಸ್
ತಂಡ ಇಂತಿದೆ : ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್ (ಉಪ ನಾಯಕ), ಸಚಿನ್ ತೆಂಡೂಲ್ಕರ್, ವಿನೋದ್ ಕಾಂ---ಬ್ಳಿ, ಯುವರಾಜ್ ಸಿಂಗ್, ರಾಬಿನ್ ಸಿಂಗ್, ವಿಜಯ್ ದಹಿಯಾ (ವಿಕೆಟ್ ಕೀಪರ್), ಅಜಿತ್ ಅಗರ್ಕರ್, ಅನಿಲ್ ಕುಂಬ್ಳೆ, ಜಹೀರ್ ಖಾನ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಷಿ ಮತ್ತು ಹೇಮಂಗ್ ಬದಾನಿ
(ಇನ್ಫೋ ವಾರ್ತೆ)