ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದ್ಯುತ್ ಸಂಪರ್ಕ ಮಾರ್ಗ ಹೆಚ್ಚಿಸಲು ಸರಕಾರ ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಮಾರ್ಗಗಳನ್ನು ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ ಎಂದು ರಾಜ್ಯ ಇಂಧನ ಸಚಿವ ವೀರಕುಮಾರ್ ಪಾಟೀಲ್ ಶನಿವಾರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಎಂಜಿನಿಯರುಗಳ ಸಂಘದ 37ನೇ ಸರ್ವಸದಸ್ಯರ ಮಹಾಧಿವೇಶನ ಉದ್ಘಾಟಿಸಿ ಮಾತನಾಡುತ್ತಿದ್ದ ಸಚಿವರು ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಿದ್ಯುತ್ ನಿಗಮವನ್ನು ಖಾಸಗೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ಖಾಸಗೀಕರಣದ ಸಂಬಂಧ ಇಲಾಖೆಯ ನೌಕರರನ್ನು ಕಡೆಗಣಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ನ ಅಧ್ಯಕ್ಷ ಹಾಗೂ ವ್ಯಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್, ನಿರ್ದೇಶಕ (ವಿತರಣೆ) ಎನ್. ವಿಜಯಭಾಸ್ಕರ್, ಪ್ರಸರಣ ವಿಭಾಗದ ನಿರ್ದೇಶಕ ಎಸ್. ಶಿವಮಲ್ಲು ಹಾಗೂ ಕೆಇಬಿ ಎಂಜಿನಿಯರುಗಳ ಸಂಘದ ಅಧ್ಯಕ್ಷ ಕೆ. ಸಿ. ನಾಯಕವಾಡಿ ಅವರು ಉಪಸ್ಥಿತರಿದ್ದರು.
Comments
Story first published: Saturday, September 9, 2000, 5:30 [IST]