ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಬಿಡುಗಡೆಗೆ ಸಂಧಾನ ಮಾರ್ಗವೇ ಸೂಕ್ತ:ಸರ್ವಪಕ್ಷ ಸಭೆ ತೀರ್ಮಾನ
ಬೆಂಗಳೂರು : ರಾಜ್ಕುಮಾರ್ ಅವರ ಬಿಡುಗಡೆಗೆ ಸಂಧಾನದ ಮಾರ್ಗವನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಕಳೆದ 41 ದಿನಗಳಿಂದ ಕಾಡುಗಳ್ಳ ವೀರಪ್ಪನ್ ವಶದಲ್ಲಿರುವ ಮೇರುನಟ ಡಾ. ರಾಜ್ಕುಮಾರ್ ಅವರನ್ನು ಬಿಡಿಸಿಕೊಳ್ಳಲು ಪರ್ಯಾಯ ಮಾರ್ಗಕ್ಕಿಂತ ಸಂಧಾನದ ಮಾರ್ಗವೇ ಸೂಕ್ತ ಎಂಬ ಅಭಿಪ್ರಾಯ ಸರ್ವಪಕ್ಷ ಸಭೆಯಲ್ಲಿ ಮೂಡಿತು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡ ಹಾಗೂ ವಾರ್ತಾ ಸಚಿವ ಬಿ.ಕೆ. ಚಂದ್ರಶೇಖರ್ ಈ ವಿಷಯ ತಿಳಿಸಿದರು. ಕೇಂದ್ರ ಸರಕಾರ ಸಹ ಸಂಧಾನದ ಮಾರ್ಗವನ್ನೇ ಮುಂದುವರಿಸಲು ಅನುಮೋದನೆ ನೀಡಿದೆ ಎಂದೂ ಅವರು ತಿಳಿಸಿದರು.
ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕರುಗಳಾದ ಬೈರೇಗೌಡ, ಪಿ.ಜಿ.ಆರ್. ಸಿಂಧ್ಯಾ, ಕೆ.ಎಚ್. ಶ್ರೀನಿವಾಸ್ ಹಾಗೂ ಜಗದೀಶ ಶೆಟ್ಟರ್ ಪಾಲ್ಗೊಂಡಿದ್ದರು.
Comments
Story first published: Saturday, September 9, 2000, 5:30 [IST]