ಆಲ-ಮ-ಟ್ಟಿ-ಯ-ಲ್ಲಿ ನೀರು ಏರಿ-ಕೆ, 30 ಕುಟುಂ-ಬ-ಗ-ಳ ಸ್ಥಳಾಂ-ತ-ರ
ಬಿಜಾಪುರ : ಆಲಮಟ್ಟಿಯಲ್ಲಿ ನೀರು ಏರುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ವಾಸಿಸುವ 30 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ
ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 514.40 ಮೀಟರ್ಗಳಿಗೇರಿದೆ. ಅಣೆಕಟ್ಟಿನಿಂದ ನೀರು ಬಿಡುತ್ತಿರುವುದರಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಸ್ಥಳಾಂತರ ಗೊಳ್ಳಬೇಕಾದ ಕುಟುಂಬಗಳಿಗೆ ಜಿಲ್ಲೆಯ ನವನಗರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಾಗಲಕೋಟೆಯ ಅಸಿಸ್ಟೆಂಟ್ ಕಮಿಷನರ್ ಸುಷ್ಮಾ ಗಡಬೋಲ್ ಹೇಳಿದ್ದಾರೆ.
ಜಯಪೀಠ, ಪಂಖಾ ಮಾಸ್ಕ್ ಮತ್ತಿತರ ಪ್ರದೇಶಗಳಲ್ಲಿ ವಾಸಿಸುವವರು ತಾತ್ಕಾಲಿಕ ವ್ಯವಸ್ಥೆಯ ಬಗೆಗೆ ಸಮಾಧಾನಗೊಂಡಿದ್ದು, ಸ್ಥಳಾಂತರಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕಳೆದೆರಡು ದಶಕಗಳಿಂದ ಶಾಸಕರಿಗೆ, ಸಂಸದರಿಗೆ ಮನವಿ ಸಲ್ಲಿಸಿದರೂ ಈ ಸಮಸ್ಯೆಯ ಬಗೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿತ್ತಿದ್ದು , ಅಸಿ-ಸ್ಟೆಂ-ಟ್ ಕಮೀ-ಷ-ನ-ರ್ ಸುಷ್ಮಾ ಗಡಬೋಲೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪುನರ್ವಸತಿ ವಿಭಾಗಕ್ಕೆ ಆದೇಶಿ-ಸಿ-ದ್ದಾ-ರೆ.
(ಇನ್ಫೋ ವಾರ್ತೆ)