Narayanapura Dam Water Level Today | ನಾರಾಯಣಪುರ ಅಣೆಕಟ್ಟು ಇಂದಿನ ನೀರಿನ ಮಟ್ಟ
ಬಸವಸಾಗರ/ನಾರಾಯಣಪುರ ಜಲಾಶಯ ಇತಿಹಾಸ:
ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿರುವ ನಾರಾಯಣಪುರ ಅಣೆಕಟ್ಟಿಗೆ ಬಸವಸಾಗರ ಜಲಾಶಯ ಎಂದು ಹೆಸರಿಡಲಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಬಾಚಿಹಾಳ-ಸಿದ್ದಾಪುರ ಹತ್ತಿದಲ್ಲಿ ಬಸವ ಸಾಗರ ಅಣೆಕಟ್ಟಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕದ ಜೀವನದಿ, ದಕ್ಷಿಣ ಭಾರತದ ಎರಡನೇ ದೊಡ್ಡ ನಡಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಸುರಪೂರ ನಿಂದ 22 ಕಿ.ಮೀ. ಅಂತರದಲ್ಲಿದೆ. ಬಸವ ಸಾಗರ ಜಲಾಶಯವು ಯಾದಗಿರಿ, ಬಾಗಲಕೋಟೆ,ವಿಜಯಪುರ ಜಿಲ್ಲೆಗಳಿಗೆ ವರದಾನವಾಗಿದೆ
ಬಸವಸಾಗರ/ನಾರಾಯಣಪುರ ಜಲಾಶಯ ಉದ್ದೇಶ
ಕೃಷ್ಣಾ ಮೇಲ್ದಂಡೆ ಯೋಜನೆಯ ಭಾಗವಾದ ನಾರಾಯಣಪುರದಲ್ಲಿರುವ ಈ ಅಣೆಕಟ್ಟು ನೀರಾವರಿ, ವಿದ್ಯುತ್ ಬಳಕೆಗೆ ಯೋಗ್ಯವಾಗಿದೆ. ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ
ಬಸವಸಾಗರ ಜಲಾಶಯ ಸಾಮರ್ಥ್ಯ:
ಉದ್ದ : 10,637 ಮೀಟರ್ಸ್
ಎತ್ತರ: 29 ಮೀಟರ್ಸ್
ನೀರಿನ ಸಂಗ್ರಹ: 31.47 ಟಿಎಂಸಿ
ಹಿನ್ನೀರಿನ ವ್ಯಾಪ್ತಿ: 136 ಕಿ.ಮೀ
ಒಟ್ಟು ಲೈವ್ ಸ್ಟೋರೇಜ್ : 26.14 ಟಿಎಂಸಿ
ನಾರಾಯಣಪುರ ಜಲಾಶಯ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು:
ಬಸವಸಾಗರ ಅಣೆಕಟ್ಟು ತಲುಪಲು ಸುರಪುರದಿಂದ 22 ಕಿ.ಮೀ ಕ್ರಮಿಸಬೇಕು. ಬೆಳಗ್ಗೆ 10 ಗಂಟೆ ನಂತರ ವೀಕ್ಷಣೆಗೆ ಲಭ್ಯ. . ಇದೊಂದು ಸುಂದರವಾದ ಪ್ರವಾಸಿ ತಾಣವಾಗಿದ್ದು,ಪ್ರವಾಸಿಗರಿಗೆ ಉಲ್ಲಾಸ ನೀಡುವ ತಾಣವಾಗಿದೆ. ಸರಿಸುಮಾರು ಅರ್ಧ ಕಿ.ಮೀ. ಉದ್ದವಿರುವ ಜಲಾಶಯಬೇಸಿಗೆ ಕಾಲದಲ್ಲಿಯೂ ಸೂಸುವ ಆಹ್ಲಾದಕರ ತಂಗಾಳಿ ವಿಹಾರಿಗಳಿಗೆ ಪ್ರವಾಸಿಗರಿಗೆ ಹಿತಕರ ಅನುಭವ ನೀಡುವ ತಾಣವಾಗಿದೆ.