ರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನ
ಬಸವಣ್ಣನ ವಚನಗಳನ್ನು ಸಾಂದರ್ಭಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ, ವಚನಗಳ ಮೇಲಿನ ತಮ್ಮ ಜ್ಞಾನವನ್ನು ಪ್ರಚುರಪಡಿಸಲು ಕೆಲ ರಾಜಕಾರಣಿಗಳು ಬಳಸುವುದು ಅಪರೂಪವೇನಲ್ಲ. ಆದರೆ, ಆ ವಚನಗಳ ಅರ್ಥವನ್ನು ಪಾಲಿಸುವಲ್ಲಿ ಯಾವತ್ತಿದ್ದರೂ ಹಿಂದೆ.
ಆದರೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣ, ಆತನ ವಚನಗಳು, ಆತ ಅಂದಿನ ಕಾಲದಲ್ಲಿಯೇ ಪ್ರತಿಷ್ಠಾಪಿಸಿದ್ದ ಪ್ರಜಾಪ್ರಭುತ್ವ, ಉತ್ತರ ಕರ್ನಾಟಕದಲ್ಲಿ ರಾಜಕಾರಣಿಗಳು ಮಾಡುತ್ತಿರುವ ಭಾಷಣಗಳಲ್ಲಿ ಅವಿಭಾಜ್ಯ ಅಂಗವಾಗಿದೆ.
ನರೇಂದ್ರ ಮೋದಿ ಅವರೇ ನುಡಿದಂತೆ ನಡೆಯಿರಿ : ರಾಹುಲ್ ವ್ಯಂಗ್ಯ
ಬಸವಣ್ಣನವರ ವಚನಗಳನ್ನು ಈ ರಾಜಕಾರಣಿಗಳು ನಿಜಜೀವನದಲ್ಲಿ ಎಷ್ಟು ಪಾಲಿಸುತ್ತಾರೋ, ಆ ವಚನಗಳಲ್ಲಿನ ಅರ್ಥ ಹೇಳುವವರಿಗೆ ತಿಳಿದಿದಿಯೋ ಇಲ್ಲವೋ, ಒಟ್ಟಿನಲ್ಲಿ ಬಸವಣ್ಣನ ವಚನಗಳನ್ನು ಬಳಸಿ, ಭಕ್ತಿ ಭಂಡಾರಿ ಬಸವೇಶ್ವರನನ್ನೂ ರಾಜಕಾರಣದ ಮೊಗಸಾಲೆಗೆ ಎಳೆದುತಂದಿದ್ದಾರೆ.
ಬಸವಣ್ಣನ ವಚನಗಳನ್ನು ಆಗಾಗ ನೆನಪಿಸಿಕೊಳ್ಳುವ ಉದ್ದೇಶ ಒಳ್ಳೆಯದೇ ಆದರೂ, ಕನ್ನಡ ಗೊತ್ತಿಲ್ಲದ ರಾಹುಲ್ ಗಾಂಧಿಯವರು ಅದನ್ನು ಆಡುವಾಗ ಅರ್ಥ ಕಳೆದುಕೊಂಡು, ಅನರ್ಥವಾಗಿ, ಅಧ್ವಾನವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ವಸ್ತುವಾಗಿದ್ದು ಮಾತ್ರ ದುರಂತ.
ಅಂಥದೊಂದು ನಮೂನೆ ಇಲ್ಲಿದೆ ನೋಡಿ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅವರು ಮಾತನಾಡುತ್ತಿದ್ದಾಗ,
ರಾಹುಲ್ ಗಾಂಧಿ 'ಹೇಳಿದ್ದನ್ನೇ ಹೇಳೋ ಕಿಸ್ಬಾಯಿ ದಾಸ'
ಬಸವಣ್ಣನ
'ಇವನಾರವ,
ಇವನಾರವ,
ಇವನಾರವ
ಇವ
ನಮ್ಮವ,
ಇವ
ನಮ್ಮವ,
ಇವ
ನಮ್ಮವ...
ಎಂಬುದನ್ನು
ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಮಾತಿನುದ್ದಕ್ಕೂ ಬಸವಣ್ಣನ ಜಪ
ರಾಹುಲ್...
ಇವನರ್ವ,
ಇವನರ್ವ,
ಇವನರ್ವ
ಇವನಮ್ವ,
ಇವನಮ್ವ,
ಇವನಮ್ವ'
ಎಂದು
ಸ್ಪಷ್ಟವಾಗಿ
ಉಚ್ಚಾರಣೆ
ಮಾಡದಿರುವುದು
ಸಾಮಾಜಿಕ
ಜಾಲತಾಣದಲ್ಲಿ
ಭಾರೀ
ಚರ್ಚೆಗೆ
ಈಡಾಗಿದೆ.
ಇದೇ ಬಸವಣ್ಣನವರನ್ನು ನರೇಂದ್ರ ಮೋದಿಯವರೂ ನೆನೆಸಿಕೊಂಡಿದ್ದರು. ಆದರೆ, ಅವರು ಯಾವುದೇ ವಚನವನ್ನು ನುಡಿಯಲು ಹೋಗಿರಲಿಲ್ಲ. ಆದರೆ, ಕನ್ನಡದಲ್ಲಿ ಕೆಲಬಾರಿ ಮಾತಾಡಲು ಹೋಗಿ ಆಭಾಸವಾಗಿದ್ದೂ ಇದೆ. ಈ ನಾಯಕರಿಗೆ ಕನ್ನಡ ಗೊತ್ತಿಲ್ಲದಿದ್ದರೂ, ಅವರಿವರಿಂದ ಹೇಳಿಸಿಕೊಂಡು ಕನ್ನಡ ಭಾಷೆ ಬಳಸುವ ಅಗತ್ಯವಿದೆಯೆ?