ಝೆನ್ ಕಥೆ: ತೊಂದರೆಗೆ ನನ್ನಲ್ಲಿ ಪರಿಹಾರವಿಲ್ಲ, ಆದರೆ...!
ಚೀನಾದ ಒಂದು ಊರಲ್ಲಿ ಉತ್ಸವ ನಡೆಯುತ್ತಿತ್ತು. ಆ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಒಬ್ಬ ಝೆನ್ ಗುರುವಿನ ಭಾಷಣವಿತ್ತು.
ಝೆನ್ ಗುರು ಜೀವನದ ಸಾರ್ಥಕತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದ. ಕೊನೆಯಲ್ಲಿ, 'ನನಗೆ ಗೊತ್ತಿರುವಂತೆ ನಾನು ಮಾತನಾಡಿದ ವಿಚಾರದ ಬಗ್ಗೆ ನಿಮ್ಮಲ್ಲಿ ಇನ್ನೂ ಸಂದೇಹ ಅಥವಾ ಗೊಂದಲಗಳಿರಬಹುದು. ಯಾವಾಗ ಬೇಕಾದರೂ ನನ್ನ ಆಶ್ರಮಕ್ಕೆ ಬನ್ನಿ. ಅವುಗಳನ್ನು ಪರಿಹರಿಸಿಕೊಳ್ಳಿ" ಎಂದು ಹೇಳಿದ.
ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ
ಝೆನ್ ಗುರುವಿನ ಭಾಷಣ ಕೇಳಿಸಿಕೊಂಡ ಮನಃಶಾಸ್ತ್ರಜ್ಞನೊಬ್ಬ, ಕಾರ್ಯಕ್ರಮ ಮುಗಿದ ಬಳಿಕ ಗುರುವನ್ನು ಹಿಂಬಾಲಿಸಿ, ಮಾರ್ಗಮಧ್ಯದಲ್ಲಿ ಅವನನ್ನು ಸೇರಿಕೊಂಡ. ಆತನೊಟ್ಟಿಗೆ ನಡೆಯುತ್ತಾ ಕೆಲವು ವಿಷಯಗಳನ್ನು ಚರ್ಚಿಸಿದ.
ಮನಃಶಾಸ್ತ್ರಜ್ಞ ಕೇಳಿದ, "'ನನ್ನದೊಂದು ಕೊನೆಯ ಪ್ರಶ್ನೆಯಿದೆ. ನಾನೊಬ್ಬ ಮನಃಶಾಸ್ತ್ರಜ್ಞ. ನಾನು ಓದಿರುವ ಶಾಸ್ತ್ರವು ನನಗೆ ರೋಗಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿಸುತ್ತದೆ. ಉಳಿದ ಕೆಲವು ವಿಷಯಗಳನ್ನು ನಾನು ಅವರನ್ನು ಪ್ರಶ್ನಿಸುವ ಮೂಲಕಸ ತಿಳಿದುಕೊಳ್ಳುತ್ತೇನೆ. ಇದರಿಂದ ನನಗೆ ಅವರ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಆದರೆ ನನಗೆ ನಿಮ್ಮ ದಾರಿಯೇ ಬೇರೆ ಎಂದೆನಿಸುತ್ತದೆ. ನೀವು ಹೇಗೆ ಅವರ ತೊಂದರೆಗಳನ್ನು ಬಗೆಹರಿಸುತ್ತೀರಾ? ಹೇಗೆ ಉತ್ತರಿಸುತ್ತೀರಾ?'
ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು
ಆಗ ಝೆನ್ ಗುರು ಸಣ್ಣನೆಯ ಸ್ವರದಲ್ಲಿ ಹೇಳಿದ, 'ಯಾವ ತೊಂದರೆಗೂ ಪರಿಹಾರ ನನ್ನ ಉತ್ತರದಲ್ಲಿ ಇರುವುದಿಲ್ಲ. ಆದರೆ ನಾನು ನನ್ನ ಬಳಿ ಬಂದವರನ್ನು ಅವರು ಪ್ರಶ್ನೆಗಳನ್ನೇ ಕೇಳಲಾಗದ ಸ್ಥಿತಿಗೆ ಕೊಂಡೊಯ್ಯುತ್ತೇನೆ ಅಷ್ಟೇ. ಸಮಸ್ಯೆಗಳಿಗೆ ಸಮಾಧಾನವು ಉತ್ತರವಾಗುವುದಿಲ್ಲ. ಆ ಪ್ರಶ್ನೆಗಳೇ ಇಲ್ಲದಿರುವುದು, ಅಷ್ಟೇ' ಎಂದ.
ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?
ಮನಃಶಾಸ್ತ್ರಜ್ಞನಿಗೆ ಹೊಸದೊಂದು ಯೋಚನೆ ಹೊಳೆಯಿತು. ನಗುತ್ತಾ ಗುರುವಿಗೆ ನಮಸ್ಕರಿಸಿ ಅಲ್ಲಿಂದ ಹೊರಟ.
(ಸಂಗ್ರಹ)