ಎಂಕೆಗಾಂಧಿ ಕಥಾಸ್ಪರ್ಧೆ ಬಹುಮಾನ ವಿಜೇತರು
ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು ಭಾರೀ ಉತ್ಸಾಹದಿಂದಲೇ ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡು ಕತೆಗಳನ್ನು ಬರೆದು ಕಳುಹಿಸಿಕೊಟ್ಟಿದ್ದರು. ಆ ಕತೆಗಳನ್ನು ಕತೆಗಾರರಾದ ಡಾ.ನಟರಾಜ್ ಹುಳಿಯಾರ್, ಕೃಷ್ಣ ಮಾಸಡಿ ಮತ್ತು ಅನಿತಾ ಹುಳಿಯಾರ್ರವರು ಓದಿ, ಕೂತು ಚರ್ಚಿಸಿ, ಉತ್ತಮವಾದ ಮೂರು ಕತೆಗಳನ್ನು ಆಯ್ಕೆ ಮಾಡಿದರು. ಆ ಮೂರು ಬಹುಮಾನಿತ ಕತೆಗಳು ಇಂತಿವೆ :
*
ಮೊದಲ
ಬಹುಮಾನ
ರೂ.
6,000,
ಬಹುಮಾನಿತ
ಕತೆ
>
ಗಾಂಧಿಕಟ್ಟೆ
>ಕತೆಗಾರರು
>
ಕಲಿಗಣನಾಥ
ಗುಡದೂರು
*
ಎರಡನೆಯ
ಬಹುಮಾನ
ರೂ.
4,000,
ಬಹುಮಾನಿತ
ಕತೆ
>
ವಂದೇಮಾತರಂ
>
ಕತೆಗಾರರು
>
ಭಾಗೀರಥಿ
ಹೆಗಡೆ
*
ಮೂರನೆಯ
ಬಹುಮಾನ
ರೂ.
3,000
ಬಹುಮಾನಿತ
ಕತೆ
>
ಗಾಂಧಿ
ವೇಷ
>
ಕತೆಗಾರರು>
ವಿಶ್ವನಾಥ
ಪಾಟೀಲಗೋನಾಳ
ಆಯ್ಕೆಯಾದ ಈ ಮೂರು ಕತೆಗಳನ್ನು ಬರೆದ ಕತೆಗಾರರನ್ನು ದಿನಾಂಕ 22.05.2010 ರ ಶನಿವಾರ ಬೆಂಗಳೂರಿಗೆ ಬರಮಾಡಿಕೊಂಡು, ಪ್ರೆಸ್ ಕ್ಲಬ್ನಲ್ಲಿ, ಬಹುಮಾನಿತ ಕತೆಗಾರರಿಗೆ ನಾಡಿನ ಸಂಸ್ಕೃತಿ ಚಿಂತಕರಾದ ಪ್ರೊ. ಕಿ.ರಂ. ನಾಗರಾಜ ಅವರು ಬಹುಮಾನ ವಿತರಣೆ ಮಾಡಿದರು. ವಿಕ್ರಾಂತ ಕರ್ನಾಟಕ ಪತ್ರಿಕೆಯ ರವೀಂದ್ರ ರೇಷ್ಮೆ, ಬಸವರಾಜು ಹಾಗೂ ಬಹುಮಾನವನ್ನು ಪ್ರಾಯೋಜಿಸಿದ ರವಿ ಕೃಷ್ಣಾ ರೆಡ್ಡಿಯವರು ಉಪಸ್ಥಿತರಿದ್ದರು.