ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಜ್ಞಾಸೆ

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

What is life all about?
ಘಟಿಸುವುದೆಲ್ಲವೂ ವಿಧಿಲಿಖಿತವೆಂದಾದರೆ
ಮನುಷ್ಯಪ್ರಯತ್ನಕ್ಕೆ ಏನು ಅರ್ಥ?
ಬ್ರಹ್ಮನೇ ಸಕಲವನ್ನೂ ಬರೆದುಬಿಟ್ಟರೆ
ಮಾನವಯತ್ನವೆಂಬುದು ವ್ಯರ್ಥ

ಹಾಗೆಂದು, ನಮ್ಮ ಕೈಯಲ್ಲಿದೆಯೇ
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು

ಹುಟ್ಟು ನನ್ನಧೀನದಲ್ಲಿರಲಿಲ್ಲ,
ಸಾವು ನನ್ನಧೀನದಲ್ಲಿರದು;
ನಡುವಿನ ಜೀವನ ನನ್ನದು
ಎಂದುಕೊಂಡರೆ ಅದೂ ಎಷ್ಟೋ ಸಲ
ನನ್ನಧೀನಕ್ಕೆ ಬರದು

ಇದೆಲ್ಲ ತಂತಾನೆಯೇ?
ಅಥವಾ ನಿಯಾಮಕನಿದ್ದಾನೆಯೇ?

ತಂತಾನೇ ಎಂದಾದರೆ
ಜೀವನಕ್ಕಿಲ್ಲ ಅರ್ಥ;
ಮೌಲ್ಯವೆಂಬುದಕ್ಕೂ ಅರ್ಥವಿಲ್ಲ,
ವಿಶ್ವಕ್ಕೂ ಇಲ್ಲ ಅರ್ಥ.

ಆದರೆ, ವಾಸ್ತವ ಹೀಗಿಲ್ಲ.
ಸೃಷ್ಟಿಯ ಕಣಕಣದಲ್ಲೂ
ಬಾಳಿನ ಕ್ಷಣಕ್ಷಣದಲ್ಲೂ
ಗೋಚರಿಸುತ್ತಿದೆಯಲ್ಲ
ಅರ್ಥಗಳ ಮಾಲೆ!
ಇದುವೇ ವಿಧಿಲೀಲೆ!

ಅಂದಮೇಲೆ,
ವಿಧಿಯುಂಟು;
ವಿಧಿಲಿಖಿತ ಉಂಟು.

ಜೊತೆಯಲ್ಲೇ,
ಬಾಳಿನ ನಿಧಿಯಾದ
ಸ್ವಪ್ರಯತ್ನಗಳಿಗೂ
ನೆಲೆಯುಂಟು,
ಬೆಲೆಯುಂಟು.

ವಿಧಿಲಿಖಿತಕ್ಕೂ ಸ್ವಪ್ರಯತ್ನಕ್ಕೂ
ಪರಸ್ಪರ ನಂಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X