ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಜ್ಞಾಸೆ
ಮನುಷ್ಯಪ್ರಯತ್ನಕ್ಕೆ ಏನು ಅರ್ಥ?
ಬ್ರಹ್ಮನೇ ಸಕಲವನ್ನೂ ಬರೆದುಬಿಟ್ಟರೆ
ಮಾನವಯತ್ನವೆಂಬುದು ವ್ಯರ್ಥ
ಹಾಗೆಂದು,
ನಮ್ಮ
ಕೈಯಲ್ಲಿದೆಯೇ
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ಹುಟ್ಟು
ನನ್ನಧೀನದಲ್ಲಿರಲಿಲ್ಲ,
ಸಾವು
ನನ್ನಧೀನದಲ್ಲಿರದು;
ನಡುವಿನ
ಜೀವನ
ನನ್ನದು
ಎಂದುಕೊಂಡರೆ
ಅದೂ
ಎಷ್ಟೋ
ಸಲ
ನನ್ನಧೀನಕ್ಕೆ
ಬರದು
ಇದೆಲ್ಲ
ತಂತಾನೆಯೇ?
ಅಥವಾ
ನಿಯಾಮಕನಿದ್ದಾನೆಯೇ?
ತಂತಾನೇ
ಎಂದಾದರೆ
ಜೀವನಕ್ಕಿಲ್ಲ
ಅರ್ಥ;
ಮೌಲ್ಯವೆಂಬುದಕ್ಕೂ
ಅರ್ಥವಿಲ್ಲ,
ವಿಶ್ವಕ್ಕೂ
ಇಲ್ಲ
ಅರ್ಥ.
ಆದರೆ,
ವಾಸ್ತವ
ಹೀಗಿಲ್ಲ.
ಸೃಷ್ಟಿಯ
ಕಣಕಣದಲ್ಲೂ
ಬಾಳಿನ
ಕ್ಷಣಕ್ಷಣದಲ್ಲೂ
ಗೋಚರಿಸುತ್ತಿದೆಯಲ್ಲ
ಅರ್ಥಗಳ
ಮಾಲೆ!
ಇದುವೇ
ವಿಧಿಲೀಲೆ!
ಅಂದಮೇಲೆ,
ವಿಧಿಯುಂಟು;
ವಿಧಿಲಿಖಿತ
ಉಂಟು.
ಜೊತೆಯಲ್ಲೇ,
ಬಾಳಿನ
ನಿಧಿಯಾದ
ಸ್ವಪ್ರಯತ್ನಗಳಿಗೂ
ನೆಲೆಯುಂಟು,
ಬೆಲೆಯುಂಟು.
ವಿಧಿಲಿಖಿತಕ್ಕೂ
ಸ್ವಪ್ರಯತ್ನಕ್ಕೂ
ಪರಸ್ಪರ
ನಂಟು
Comments
ಸಾವು ಹುಟ್ಟು ಕನ್ನಡ ಕವನ ಆನಂದರಾಮ ಶಾಸ್ತ್ರೀ ಬೆಂಗಳೂರು ದೇವರು ಜೀವನ birth death life kannada poem anandarama shastri bangalore god
Story first published: Monday, September 20, 2010, 12:28 [IST]