ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪರಿಚಿತ ಕವಿಯ ಅಪರಿಚಿತ ಕವನ
ಕೊಡಬೇಕಿತ್ತು ಈ ಮನಸ್ಸಿಗೊಂದು ಮಚ್ಚೆಇಲ್ಲದ, ಘಾಸಿಗೊಳ್ಳದ
ಕೊಚ್ಚೆ ರಾಡಿಯಾಗದ, ಶಾಖಕ್ಕೆ ಬಾಡಿರದ ದೇಹವನ್ನು!
ಆಗತಾನೆ
ಮೈಮುರಿದೆದ್ದ
ಷೋಡಸಿ
ಹೊಳಪಿನಂತಹ
ಮಧುರತೆಯ
ಝಳಪಿಸುವ
ಬೆಳಗಿನಂತಹ
ದೇಹವೊಂದು
ಬೇಕಿತ್ತು
ಈ
ಮನಸ್ಸಿಗೆ!
ನಡುನೆತ್ತಿ
ತಾಪದಲ್ಲಿ
ಬೆಂದು
ಮುನ್ನಡೆದಂತೇ
ಸಿಕ್ಕಿದ್ದು
ಈ
ಮನಸ್ಸಿಗೆ
ಒಂದು
ನೆರಳು;
ಎಂತಹ
ಅಪರಿಚಿತ
ಈ
ಪರಿಚಯದಾಟ?
ನೋವಿಗೂ
ನೆರಳಿಗೂ
ಇದ್ಯಾವ
ಪರಿಯ
ಕಣ್ಣುಮುಚ್ಚಾಟ;
ಕೊನೆಗೂ ಸಿಕ್ಕೀತು ನೆರಳು ನಡೆದಿದ್ದಾದರೆ ಸೂರ್ಯನಗುಂಟ!
Comments
ಅಂಜಲಿ ರಾಮಣ್ಣ ಕನ್ನಡ ಕವನ ಬೆಳಕು ಸೂರ್ಯ ಸುಂದರಿ anjali ramanna bangalore kannada poem kannada poetry shelter pain ಮಹಿಳೆ
Story first published: Monday, March 15, 2010, 15:04 [IST]