ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಚಿತ ಕವಿಯ ಅಪರಿಚಿತ ಕವನ

By * ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

Anjali Ramanna, Advocate, Bangalore
ನಡೆದಿದ್ದೆ ದಾರಿಯುದ್ದಕ್ಕೂ; ತಪ್ಪಲಿನ ನೆಳಲ ಹಾದಿಯುದ್ದಕ್ಕೂ..
ಕೊಡಬೇಕಿತ್ತು ಈ ಮನಸ್ಸಿಗೊಂದು ಮಚ್ಚೆಇಲ್ಲದ, ಘಾಸಿಗೊಳ್ಳದ
ಕೊಚ್ಚೆ ರಾಡಿಯಾಗದ, ಶಾಖಕ್ಕೆ ಬಾಡಿರದ ದೇಹವನ್ನು!

ಆಗತಾನೆ ಮೈಮುರಿದೆದ್ದ ಷೋಡಸಿ ಹೊಳಪಿನಂತಹ
ಮಧುರತೆಯ ಝಳಪಿಸುವ ಬೆಳಗಿನಂತಹ
ದೇಹವೊಂದು ಬೇಕಿತ್ತು ಈ ಮನಸ್ಸಿಗೆ!

ನಡುನೆತ್ತಿ ತಾಪದಲ್ಲಿ ಬೆಂದು ಮುನ್ನಡೆದಂತೇ ಸಿಕ್ಕಿದ್ದು
ಈ ಮನಸ್ಸಿಗೆ ಒಂದು ನೆರಳು; ಎಂತಹ ಅಪರಿಚಿತ ಈ ಪರಿಚಯದಾಟ?
ನೋವಿಗೂ ನೆರಳಿಗೂ ಇದ್ಯಾವ ಪರಿಯ ಕಣ್ಣುಮುಚ್ಚಾಟ;

ಕೊನೆಗೂ ಸಿಕ್ಕೀತು ನೆರಳು ನಡೆದಿದ್ದಾದರೆ ಸೂರ್ಯನಗುಂಟ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X