ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನಾಡು

By * ಲಕ್ಷ್ಮಿ ರಂಗಸ್ವಾಮಿ
|
Google Oneindia Kannada News

Lakshmi Rangaswamy
ಪಚ್ಚೆಯ ಹಸುರಿನ ಸೀರೆಯುಟ್ಟು
ನಾನಾ ನದಿಗಳಿಗೆ ಜಾಗಕೊಟ್ಟು
ಜಲಪಾತಗಳ ಧುಮುಕಬಿಟ್ಟು
ದಿನಮಣಿ ಇಡುವನು ಮೂಡಣದಿ ಬೊಟ್ಟು

ಸುತ್ತಲೂ ಹರಿದ್ವರ್ಣದ ಕಾಡುಗಳು
ಪಡೆದಿದೆ ಆಶ್ರಯವ ನಾನಾ ಪ್ರಾಣಿಗಳು
ತೇಗ ಶ್ರೀಗಂಧ ಮರಗಳ ಸಾಲು
ಮಾಡಿವೆ ಕನ್ನಡತಿಯ ಎಲ್ಲದರಲು ಮೇಲು

ಸಾಂಸ್ಕೃತಿಕ ಕಲೆಗಳ ತವರೂರು
ಇಲ್ಲಿ ಕವಿಗಳದೆ ಕಾರುಬಾರು
ತಾಯಿ ಮಡಿಲ ತುಂಬಿದೆ ಏಳು ಜ್ಞಾನಪೀಠ
ಶಾಸ್ತ್ರೀಯ ಸ್ಥಾನಮಾನದ ಗೌರವ ಪಟ್ಟ

ವಿಜಯ ಕನಕ ಪುರಂದರದಾಸರು
ಸಾವಿರ ದೀಪಗಳರಮನೆಯ ಅರಸರು
ಗಣ್ಯಾತಿಗಣ್ಯ ವ್ಯಕ್ತಿಗಳನೇಕರು
ಕರ್ನಾಟಕವೇ ನಮ್ಮೆಲ್ಲರ ತವರು

ಉಳಿಸಿಬೆಳೆಸುವಾ ಬನ್ನಿ ಕರುನಾಡನು
ಬನ್ನಿ ಹಾಡುವಾ ಕನ್ನಡಮ್ಮನ ಹಾಡನು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X