ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಎಸ್.ಶ್ರೀನಿಧಿಯವರ ಅರ್ಧಂಬರ್ಧ ಕವಿತೆಗಳು

By Staff
|
Google Oneindia Kannada News

Shreenidhi D Sಡಿ.ಎಸ್.ಶ್ರೀನಿಧಿ, ಬೆಂಗಳೂರು

ಕಡಲು ಜಗದ ದೊಡ್ಡ ಪ್ರೇಮಿ
ನಿತ್ಯ ಮಿಲನ ಅದಕೆ.
ನದಿಗಳಿಹುದು ಲಕ್ಷ ಲಕ್ಷ
ತೀರದದರ ಬಯಕೆ.

****
ನಟ್ಟಿರುಳ ದಾರಿಯಲಿ ನಡೆಯುತ್ತಿದ್ದರು ಅವರು
ದೂರ ತಿರುವಿನಲೆಲ್ಲೋ ಕಂಡಿತ್ತು ಸೊಡರು.
ಬೆಳಕ ನೋಡಿದ್ದೇ ತಡ, ಕೈ ಬೆಸುಗೆ ಬಿಗಿಯಿತು
ಹೆಜ್ಜೆಗಳ ಪಥ ಮೆಲ್ಲ ಹಿಂದಕ್ಕೆ ತಿರುಗಿತು

****
ಕೆರೆಯ ಕಟ್ಟೆಯ ಮೇಲೆ ಅವಳು ನಡೆದಿದ್ದಳು.
ಮಿಂದೊದ್ದೆ ಪಾದಗಳ ಅಲ್ಲೆ ಊರಿದ್ದಳು.
ಹೂವು ತಂದಿದ್ದನವ ದೇವರಾ ಪೂಜೆಗೆ.
ಚೆಲ್ಲಿ ಹೋದವು ಎಲ್ಲ, ಒದ್ದೆ ಪಾದಗಳ ಜಾಡಿಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X