ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿ.ಎಸ್.ಶ್ರೀನಿಧಿಯವರ ಅರ್ಧಂಬರ್ಧ ಕವಿತೆಗಳು
ಡಿ.ಎಸ್.ಶ್ರೀನಿಧಿ, ಬೆಂಗಳೂರು
ಕಡಲು
ಜಗದ
ದೊಡ್ಡ
ಪ್ರೇಮಿ
ನಿತ್ಯ
ಮಿಲನ
ಅದಕೆ.
ನದಿಗಳಿಹುದು
ಲಕ್ಷ
ಲಕ್ಷ
ತೀರದದರ
ಬಯಕೆ.
****
ನಟ್ಟಿರುಳ
ದಾರಿಯಲಿ
ನಡೆಯುತ್ತಿದ್ದರು
ಅವರು
ದೂರ
ತಿರುವಿನಲೆಲ್ಲೋ
ಕಂಡಿತ್ತು
ಸೊಡರು.
ಬೆಳಕ
ನೋಡಿದ್ದೇ
ತಡ,
ಕೈ
ಬೆಸುಗೆ
ಬಿಗಿಯಿತು
ಹೆಜ್ಜೆಗಳ
ಪಥ
ಮೆಲ್ಲ
ಹಿಂದಕ್ಕೆ
ತಿರುಗಿತು
****
ಕೆರೆಯ
ಕಟ್ಟೆಯ
ಮೇಲೆ
ಅವಳು
ನಡೆದಿದ್ದಳು.
ಮಿಂದೊದ್ದೆ
ಪಾದಗಳ
ಅಲ್ಲೆ
ಊರಿದ್ದಳು.
ಹೂವು
ತಂದಿದ್ದನವ
ದೇವರಾ
ಪೂಜೆಗೆ.
ಚೆಲ್ಲಿ
ಹೋದವು
ಎಲ್ಲ,
ಒದ್ದೆ
ಪಾದಗಳ
ಜಾಡಿಗೆ
Story first published: Thursday, February 14, 2008, 16:45 [IST]