ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತಾ ನಿನ್ನ ಕೋರುತಾ

By Staff
|
Google Oneindia Kannada News
  • ಮಂಜುನಾಥ್‌ ಗೀತಾ,
    ತಗಡೂರು, ನಂಜನಗೂಡು ತಾಲ್ಲೂಕು.
ಜಗವ ಜೀವಂತ ನಿಲಿಸಿರುವ ಕರುಣೆಯ ಕರಗಳೇ
ಉರಿಯುತಿರುವ ಹುಲು ಜೀವಗಳ ಮೇಲಿರಲಿ
ತಂಪು ತುಂಬಿದ ನಿಮ್ಮ ಜೀವಗಳ ನೆರಳು.

ಮೊದಲ ಮಾತಿಗೇ ಹೊತ್ತಿಬಿಡುವ ಕಾಗದದಾತ್ಮಗಳಿಗೆ
ಬಂದೇ ಬರಲಿ ಕಣ್ಣೀರಿಗೆ ಕರಗುವ ಒಂದಾದರೂ ಗಳಿಗೆ .

ಯಾರು ಚೂರಿ ಮೊನೆಗೆ ನೋವ ಸವರಿ ತಂದರೋ
ಯಾರು ಬಂದೂಕು ಮೇಲೆ ಸಾವ ಸವಾರಿ ಬಂದರೋ
ಅವರ ಕಂಗಳಲಿ ನೊಂದವರ ಅಳು ತಿಳಿಯಲಿ.

ಒಡೆದ ಬಳೆಸದ್ದು ಬಿದ್ದಿವೆ ಸಮಾಧಿಗಳ ಮೇಲೆ
ಗೊತ್ತಾಗಲಿ ಕಾಲ ಕೂಡುವ ಕ್ಷಣಕ್ಷಣಗಳಿಗೆ
ಸಮಾಧಿಯಾಳ ಜೀವಗಳು ಸತ್ತ ಬಗೆ

ನೆಲ ದಾಟಿ ಹೋದ ನುಡಿಗಳ ಬಾಯಿಗೆ ಬೀಗವಿರಲಿ
ಭಾವ ಬದಲಿಸುವ ಬದುಕಿಗೆ ಗಟ್ಟಿ ಬದುವಿರಲಿ.

ಕತ್ತಿಗಳ ಕಾಲ ಆಯಿತಲ್ಲ ಅನ್ನಬಹುದು ನೀವು
ಬೆಳೆದಿವೆಯಲ್ಲ ರಕ್ತಕೆ ಹುಟ್ಟಿದ ಅಣುರೇಣು ಬಾಂಬು
ಸಾವಾಗಲಿ ಅವಕೆ ಅವು ಹುಟ್ಟುವ ಮುಂಚೆ

ಮುಗಿಲಾಚೆ ಇರಬಹುದಾದ ಮಮತೆಗಳೇ
ಎಲ್ಲಾ ತಲೆಗಳ ಮೇಲಿರಲಿ ನಿಮ್ಮ ಹರಕೆ
ಪ್ರಾಚೀನದಿಂದಲೂ ಬದುಕಿ ಬಂದಿರುವ ಕವಿತೆಗಳೇ
ನಾಳೆಯ ಬಾಳ ಉಳಿಸುವ ಚಾಕರಿ ನಿಮ್ಮದು ; ನೆನಪಿರಲಿ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X