ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೀಪಾವಳಿಯಿಂದು
- ಎಸ್.ಎಲ್. ಸುರೇಂದ್ರಕುಮಾರ್
ದೀಪಗಳಿಗೆ ಋಣಿಯಾಗು ಎಂದಿದೆ
ದೀಪಗಳ ಬೆಳಕೆಲ್ಲ ಒಂದೆ ಅಲ್ಲವೆ
ದೀಪಗಳ ಬದುಕೆಲ್ಲ ಹೀಗೆ ಅಲ್ಲವೆ
ಉರಿಯುತಲಿ
ಸವೆಸುವವು
ಬದುಕನ್ನು
ಬೆಳಗುತಲಿ
ಬದುಕಿನಲಿ
ನಮ್ಮನ್ನು
ಉರಿದುರಿದು
ಉರಿನುಂಗಿ
ಉರಿಯುತಲೆ
ಇಹವು
ಬೆಳಕುಗುಳಿ
ಬೆಂಗಾರಿನಿಂದು
ಬೆಳಗುತಲೆ
ಇಹವು
ಬೆಳಕಾಗಲು
ಬೆಳ್ಳಿಯ
ದೀಪಗಳಾದರೇನು
ಬೆಳಗಲು
ಮಣ್ಣಿನ
ದೀಪಗಳಾದರೇನು
ಉರಿಯುವ
ಹಣತೆಗೆ
ಹಸಿವಾದಾಗ
ಕೇಳುವುದೇನು
ಎಣ್ಣೆ
ಬತ್ತಿಯಲ್ಲದೆ
ಆಹಾರ
ಮತ್ತಿನ್ನೇನು
ಏಕತೆಯ
ಸಾರ
ಸಾರುತಲಿಹುದು
ಬಡವ
ಬಲ್ಲಿದ
ಭೇದವನರಿಯದು
ಜಾತಿ
ನೀತಿಗಳೆಂಬುದನು
ಅರಿಯದು
ದೀಪಾವಳಿಯಿದು
ಬೆಳಗುವ
ದೀಪಗಳ
ಪರಿಯಿದು.
Story first published: Friday, April 4, 2003, 5:30 [IST]