ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಯಿಂದು

By Staff
|
Google Oneindia Kannada News
  • ಎಸ್‌.ಎಲ್‌. ಸುರೇಂದ್ರಕುಮಾರ್‌
ದೀಪಾವಳಿ ಹಬ್ಬ ಬಂದು ನಿಂದಿದೆ
ದೀಪಗಳಿಗೆ ಋಣಿಯಾಗು ಎಂದಿದೆ
ದೀಪಗಳ ಬೆಳಕೆಲ್ಲ ಒಂದೆ ಅಲ್ಲವೆ
ದೀಪಗಳ ಬದುಕೆಲ್ಲ ಹೀಗೆ ಅಲ್ಲವೆ

ಉರಿಯುತಲಿ ಸವೆಸುವವು ಬದುಕನ್ನು
ಬೆಳಗುತಲಿ ಬದುಕಿನಲಿ ನಮ್ಮನ್ನು
ಉರಿದುರಿದು ಉರಿನುಂಗಿ ಉರಿಯುತಲೆ ಇಹವು
ಬೆಳಕುಗುಳಿ ಬೆಂಗಾರಿನಿಂದು ಬೆಳಗುತಲೆ ಇಹವು

ಬೆಳಕಾಗಲು ಬೆಳ್ಳಿಯ ದೀಪಗಳಾದರೇನು
ಬೆಳಗಲು ಮಣ್ಣಿನ ದೀಪಗಳಾದರೇನು
ಉರಿಯುವ ಹಣತೆಗೆ ಹಸಿವಾದಾಗ ಕೇಳುವುದೇನು
ಎಣ್ಣೆ ಬತ್ತಿಯಲ್ಲದೆ ಆಹಾರ ಮತ್ತಿನ್ನೇನು

ಏಕತೆಯ ಸಾರ ಸಾರುತಲಿಹುದು
ಬಡವ ಬಲ್ಲಿದ ಭೇದವನರಿಯದು
ಜಾತಿ ನೀತಿಗಳೆಂಬುದನು ಅರಿಯದು
ದೀಪಾವಳಿಯಿದು ಬೆಳಗುವ ದೀಪಗಳ ಪರಿಯಿದು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X