ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಲಿದ್ದಾರವರು ?
-
ಭೀಮ
ಪ್ರಕಾಶ್
ಅಡ್ಕಸ್ಥಳ,
ಬೋಲ್ಡರ್, ಕೊಲರಾಡೊ, ಯು ಎಸ್ ಎ
E-mail : [email protected]
ಕಡಲಿಗೆಸೆದವರೆಲ್ಲಿ ?
ಸತಿ ಸುತರ ವಿಕ್ರಯಿಸಿ
ಮಸಣ ಕಾದವರು
ಕಂಡು
ಮರಳಿದರಂತೆ
ಸಗ್ಗ
ಸುಪ್ಪತ್ತಿಗೆಯ!
ಸಲ್ಲೇಖನಿಗಳು,
ಎಲ್ಲಿ
?
ನಾಕಶಿಲ್ಪಿಗಳು
ಅದ್ವೈತದಮೃತದಿ
ಇಳೆಯ
ತೊಳೆದವರಂದು
ಜಗದಗಲ
ವಿಜುಗೀಷು
ದಿಟ್ಟಿ
ನೆಟ್ಟವರು!
ಈ
ಅಖಂಡದ
ಭಾಂಡ
ಜಗಕೆ
ತೆರೆದವರಂದು
ಇರುಳ
ಕನಸಲಿ
ಎದೆಯ
ಕದವ
ತಟ್ಟುವರು
ಗ್ರಾಮ
ಸಂಗ್ರಾಮಕ್ಕೆ
ಕಹಳೆಯೂದಿದ
ಮಂದಿ
ಕೋಟಿ
ಜನ
ಸಾಮ್ರಾಜ್ಯ-
ದೆದೆಯ
ಹೊಕ್ಕವರು
ಸೆರೆ
ಕಂಡು
ಪರತಂತ್ರ
ಅದುಮಿ
ಸ್ವರವೆತ್ತಿದರು
ವ್ಯಸನ
ತೊಲಗಿಸೆ
ವಸನ-
ವೊಂದಕಿಳಿದವರು
ಗೋಲದಲಿ
ಗೋಳ
ತೊಳೆ-
ಯಲು
ಬಂದ
ದನಿಯೆಲ್ಲಿ
?
ಬೋಧಿ
ಮರದಡಿ
ಬದುಕು
ಗಂಧ
ತೇದವರು!
ತರತಮಕೆ
ತಿಲ
ನೀರು
ಎರೆದು
ಬೆಳೆದವರೆಲ್ಲ
ಮನದಾಳಕಿಳಿವವರು;
ನೆನಪಲುಳಿವವರು
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Thursday, March 27, 2003, 5:30 [IST]