ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿದ್ದಾರವರು ?

By Staff
|
Google Oneindia Kannada News
  • ಭೀಮ ಪ್ರಕಾಶ್‌ ಅಡ್ಕಸ್ಥಳ,
    ಬೋಲ್ಡರ್‌, ಕೊಲರಾಡೊ, ಯು ಎಸ್‌ ಎ
    E-mail : [email protected]
Bheema Prakash, Boulder, Coloradoಪಡೆಯಲವನಿಯ ಕೊಡಲಿ
ಕಡಲಿಗೆಸೆದವರೆಲ್ಲಿ ?
ಸತಿ ಸುತರ ವಿಕ್ರಯಿಸಿ
ಮಸಣ ಕಾದವರು

ಕಂಡು ಮರಳಿದರಂತೆ
ಸಗ್ಗ ಸುಪ್ಪತ್ತಿಗೆಯ!
ಸಲ್ಲೇಖನಿಗಳು, ಎಲ್ಲಿ ?
ನಾಕಶಿಲ್ಪಿಗಳು

ಅದ್ವೈತದಮೃತದಿ
ಇಳೆಯ ತೊಳೆದವರಂದು
ಜಗದಗಲ ವಿಜುಗೀಷು
ದಿಟ್ಟಿ ನೆಟ್ಟವರು!

ಈ ಅಖಂಡದ ಭಾಂಡ
ಜಗಕೆ ತೆರೆದವರಂದು
ಇರುಳ ಕನಸಲಿ ಎದೆಯ
ಕದವ ತಟ್ಟುವರು

ಗ್ರಾಮ ಸಂಗ್ರಾಮಕ್ಕೆ
ಕಹಳೆಯೂದಿದ ಮಂದಿ
ಕೋಟಿ ಜನ ಸಾಮ್ರಾಜ್ಯ-
ದೆದೆಯ ಹೊಕ್ಕವರು

ಸೆರೆ ಕಂಡು ಪರತಂತ್ರ
ಅದುಮಿ ಸ್ವರವೆತ್ತಿದರು
ವ್ಯಸನ ತೊಲಗಿಸೆ ವಸನ-
ವೊಂದಕಿಳಿದವರು
ಗೋಲದಲಿ ಗೋಳ ತೊಳೆ-
ಯಲು ಬಂದ ದನಿಯೆಲ್ಲಿ ?
ಬೋಧಿ ಮರದಡಿ ಬದುಕು
ಗಂಧ ತೇದವರು!

ತರತಮಕೆ ತಿಲ ನೀರು
ಎರೆದು ಬೆಳೆದವರೆಲ್ಲ
ಮನದಾಳಕಿಳಿವವರು;
ನೆನಪಲುಳಿವವರು

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X