ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾವು
-
ಶೈಲಜಾ
ಶ್ರೀನಾಥ್
[email protected]
ನಿನ್ನ ಬರುವಿಕೆಯಂತೂ ಯಾರಿಗೂ ಇಷ್ಟವಿಲ್ಲ
ಆದರೂ ಕರೆಸಿಕೊಳ್ಳದೇ ನೀ ಬಂದೇಬರುತ್ತೀಯ ಎಂದು ಗೊತ್ತು !
ಬಡವ,
ಬಲ್ಲಿದ,
ಹೆಂಗಸು,
ಗಂಡಸು,
ಬಾಲರು
,
ವೃದ್ಧರು
ಎಂಬ
ಭೇದವೇ
ನಿನಗಿಲ್ಲ
ಪ್ರತಿಯಾಬ್ಬರ
ಮೇಲೂ
ಅಧಿಕಾರವ
ಬೀಸಿ
ನೀ
ಅಟ್ಟಹಾಸದಿ
ಮೆರೆಯುವೆ
!
ಅದೆಷ್ಟೋ
ನೋವು
,
ಸಂಕಟ
,
ದುಗುಡ
,
ದುಮ್ಮಾನಗಳ
ಅಡಿಪಾಯದಿ
ಅರಮನೆಯ
ಕಟ್ಟಿ
ನೀ
ಬೀಗುವೆ
ಸಹಸ್ರಾರು
ಮಂದಿಯ
ನಿಟ್ಟುಸಿರ
ಕೇಳಿ
ನೀ
ಆನಂದಿಸುವೆ
!
ಯುದ್ಧ,
ಬರಗಾಲ,
ಚಂಡಮಾರುತ....
ಹೀಗೆ
ಹಲವಾರು
ಹೆಸರಲ್ಲಿ
ನೀ
ಓಡೋಡಿ
ಬಂದು
ಸಂಸಾರದಿ
ಹಾಲಾಹಲ
ಎಬ್ಬಿಸಿ
ನೋವಿನ
ತರಂಗದಿ
ನೀ
ನಲಿದಾಡುವೆ
!
ಈ
ನಿನ್ನ
ಮರ್ಮವೇ
ತಿಳಿಯದೆ
ತಬ್ಬಿಬ್ಬಾಗುವಂತೆ
ಮಾಡಿ
ನೀ
ಹಾರಿ
ಬಂದು
ನೆಮ್ಮದಿಯ
ಬಾಳ್ವೆಯ
ನುಜ್ಜಾಗಿಸುವೆ
ನಯವಂಚಕನ
ಮುಖವಾಡದಲ್ಲಿರುವ
ನಿನಗೆ
ಏನೆಂದು
ಕರೆಯಲಿ
!!!
ಕವಿತೆಯ ಕುರಿತು ಏನನ್ನಿಸಿತು- ತಪ್ಪದೇ ಬರೆಯಿರಿ
Comments
Story first published: Monday, May 26, 2003, 5:30 [IST]