ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು

By Staff
|
Google Oneindia Kannada News
Shylaja Srinathಈ ನಿನ್ನ ಹೆಸರೇ ಸಾಕು ನಡುಕತರುವುದು
ನಿನ್ನ ಬರುವಿಕೆಯಂತೂ ಯಾರಿಗೂ ಇಷ್ಟವಿಲ್ಲ
ಆದರೂ ಕರೆಸಿಕೊಳ್ಳದೇ ನೀ ಬಂದೇಬರುತ್ತೀಯ ಎಂದು ಗೊತ್ತು !

ಬಡವ, ಬಲ್ಲಿದ, ಹೆಂಗಸು, ಗಂಡಸು,
ಬಾಲರು , ವೃದ್ಧರು ಎಂಬ ಭೇದವೇ ನಿನಗಿಲ್ಲ
ಪ್ರತಿಯಾಬ್ಬರ ಮೇಲೂ ಅಧಿಕಾರವ ಬೀಸಿ ನೀ ಅಟ್ಟಹಾಸದಿ ಮೆರೆಯುವೆ !

ಅದೆಷ್ಟೋ ನೋವು , ಸಂಕಟ , ದುಗುಡ , ದುಮ್ಮಾನಗಳ
ಅಡಿಪಾಯದಿ ಅರಮನೆಯ ಕಟ್ಟಿ ನೀ ಬೀಗುವೆ
ಸಹಸ್ರಾರು ಮಂದಿಯ ನಿಟ್ಟುಸಿರ ಕೇಳಿ ನೀ ಆನಂದಿಸುವೆ !

ಯುದ್ಧ, ಬರಗಾಲ, ಚಂಡಮಾರುತ.... ಹೀಗೆ ಹಲವಾರು ಹೆಸರಲ್ಲಿ
ನೀ ಓಡೋಡಿ ಬಂದು ಸಂಸಾರದಿ ಹಾಲಾಹಲ ಎಬ್ಬಿಸಿ
ನೋವಿನ ತರಂಗದಿ ನೀ ನಲಿದಾಡುವೆ !

ಈ ನಿನ್ನ ಮರ್ಮವೇ ತಿಳಿಯದೆ ತಬ್ಬಿಬ್ಬಾಗುವಂತೆ ಮಾಡಿ
ನೀ ಹಾರಿ ಬಂದು ನೆಮ್ಮದಿಯ ಬಾಳ್ವೆಯ ನುಜ್ಜಾಗಿಸುವೆ
ನಯವಂಚಕನ ಮುಖವಾಡದಲ್ಲಿರುವ ನಿನಗೆ ಏನೆಂದು ಕರೆಯಲಿ !!!

ಕವಿತೆಯ ಕುರಿತು ಏನನ್ನಿಸಿತು- ತಪ್ಪದೇ ಬರೆಯಿರಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X