ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಕಿವಿಮಾತು

By Staff
|
Google Oneindia Kannada News
In Chess game There is no substitute for Victoryಚದು
ರಂಗವಾಡೊ ರಾಘವ
ತೋರೊ ಹಸ್ತಲಾಘವ।।

ಮೆಲ್ಲನೆತ್ತಿ ಮಂತ್ರಿಯ
ರಾಜನೆಡೆಗೆ ಹಾಯಿಸು
ಕಿಟಕಿಯಾಚೆ ತೋರಿಸು
ಕುದುರೆಯನ್ನು ಹಾರಿಸು. ।।ಚದು।।

ಒಂಟೆಯನ್ನು ಚೌಕದಿಂ
ಪಕ್ಕದಕ್ಕೆ ತಳ್ಳಿಡು
ಪದಾತಿಯನ್ನು ಬೇಗನೇ
ಎರಡು ಹೆಜ್ಜೆ ಮುಂದಿಡು. ।।ಚದು।।

ಆನೆಯನ್ನು ತೆಗೆದಿಡು
ರಾಜನನ್ನು ಮುಚ್ಚಿಡು
ಆಟದಲ್ಲಿ ಗೆಲುವು ಒಂದೆ
ಮುಖ್ಯವೆಂದು ನೆನಪಿಡು. ।।ಚದು।।

(*ಕಪಿನಯ್ಯ ಅಲ್ಲ.

ಟಿಪ್ಪಣಿಗಳು : ತ್ರಿಶ್ರ ನಡೆ ಆದಿ ತಾಳ, 1 ಮಾತ್ರೆ ಅತೀತ ಗ್ರಹ. ರಾಘವ ಚದುರಂಗವಾಡಲು ಕಲಿಯುತ್ತಿರುವ ಮಗ. ‘ಬೇಗ ಬರೋ ಬೇಗ ಬರೋ ಬೇಗ ಬಾರೊ ಕೃಷ್ಣನೆ’ ಎಂಬ ಹಾಡು ತಿಳಿದವರು ಅದೇ ಸ್ವರಗಳಲ್ಲಿ ಇದನ್ನೂ ಹಾಡಿಕೊಳ್ಳಬಹುದು.)

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X