ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನವಿ

By Staff
|
Google Oneindia Kannada News
Maya Harapanahalliಕಲ್ಲಿನಲ್ಲಿ ಅರಳುವ ಹೂವು ನಾನು
ನಲ್ಮೆಯಿಂದಿಡಿ ದೇವರ ಪಾದದಡಿ
ನೆಲದಲ್ಲಿ ತುಳಿದು ಹೊಸಕಬೇಡಿ
ಮೊದಲು ನನ್ನನ್ನು ಅರಳಲು ಬಿಡಿ
ಕರುಣೆಯಿಂದ ಹರಿಯುವ ನದಿ ನಾನು
ಕಣಿವೆ ಧರೆಯಲಿ ಧುಮುಕಲು ಬಿಡಿ
ಕಾರಣದ ಆಣೆಕಟ್ಟಿನಲ್ಲಿ ಬಂಧಿಸ ಬೇಡಿ
ಮೊದಲು ನನ್ನನ್ನು ಹರಿಯಲು ಬಿಡಿ
ಮಮತೆ ತುಂಬಿದ ಧರಣಿ ನಾನು
ಮಡಿಲಲ್ಲಿ ಬಣ್ಣವ ತುಂಬಲು ಬಿಡಿ
ಕೆಂಪು ನೀರನ್ನು ಅಲ್ಲಿ ಹರಿಸಬೇಡಿ
ಮೊದಲು ನನ್ನನ್ನು ಹಸಿರಾಗಲು ಬಿಡಿ
ಸತ್ಯ ನಾಡಿನಲ್ಲಿ ಹುಟ್ಟಿದ ಸ್ತ್ರೀ ನಾನು
ವಿಶ್ವಾಸ ಸ್ನೇಹದ ನೋಟದಿ ನೋಡಿ
ಅಗ್ನಿ ಪರೀಕ್ಷೆಗೆ ಗುರಿಪಡಿಸ ಬೇಡಿ
ಮೊದಲು ನನ್ನನ್ನು ಬದುಕಲು ಬಿಡಿ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X