ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನವಿ
-
ಮಾಯಾ
ಹರಪನಹಳ್ಳಿ
Email : [email protected]
ನಲ್ಮೆಯಿಂದಿಡಿ ದೇವರ ಪಾದದಡಿ
ನೆಲದಲ್ಲಿ ತುಳಿದು ಹೊಸಕಬೇಡಿ
ಮೊದಲು ನನ್ನನ್ನು ಅರಳಲು ಬಿಡಿ
ಕರುಣೆಯಿಂದ ಹರಿಯುವ ನದಿ ನಾನು
ಕಣಿವೆ ಧರೆಯಲಿ ಧುಮುಕಲು ಬಿಡಿ
ಕಾರಣದ ಆಣೆಕಟ್ಟಿನಲ್ಲಿ ಬಂಧಿಸ ಬೇಡಿ
ಮೊದಲು ನನ್ನನ್ನು ಹರಿಯಲು ಬಿಡಿ
ಮಮತೆ ತುಂಬಿದ ಧರಣಿ ನಾನು
ಮಡಿಲಲ್ಲಿ ಬಣ್ಣವ ತುಂಬಲು ಬಿಡಿ
ಕೆಂಪು ನೀರನ್ನು ಅಲ್ಲಿ ಹರಿಸಬೇಡಿ
ಮೊದಲು ನನ್ನನ್ನು ಹಸಿರಾಗಲು ಬಿಡಿ
ಸತ್ಯ ನಾಡಿನಲ್ಲಿ ಹುಟ್ಟಿದ ಸ್ತ್ರೀ ನಾನು
ವಿಶ್ವಾಸ ಸ್ನೇಹದ ನೋಟದಿ ನೋಡಿ
ಅಗ್ನಿ ಪರೀಕ್ಷೆಗೆ ಗುರಿಪಡಿಸ ಬೇಡಿ
ಮೊದಲು ನನ್ನನ್ನು ಬದುಕಲು ಬಿಡಿ
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Monday, March 24, 2003, 5:30 [IST]