ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿತ್ಯಾಗವೋ? ತ್ಯಾಗವೊ?

By Staff
|
Google Oneindia Kannada News

ಪರಿತ್ಯಾಗವೋ? ತ್ಯಾಗವೊ?

  • ಡಾ. ಕುಸುಮ ಭಟ್‌, ಪ್ಲಸಂಟ್‌ ಹಿಲ್ಲ್‌ , ಕೆಲಿಫೋರ್ನಿಯ
    E-mail : [email protected]
Dr. Kusuma Bhatಒಲಿದು ಬಯಸಿ ಮಾಲೆ ಇರಿಸಿ ಸುಂದರಾಂಗಿ ಸೀತೆ
ಹೃದಯ ತುಂಬಿ ರಾಮನ ಮನ ಸಾಧ್ವಿಮಣಿ ಸೀತೆ
ರಾಮ ನೀನು ನನ್ನ ಜೀವ ಎಂದಳಂದು ಸೀತೆ
ಹಗಲು ಇರುಳು ಬಳಿಯೆ ಇರಲು ಭಾಗ್ಯವೆಂದ ಸೀತೆ

ರಾಣಿಯಾಗಿ ಹೃದಯದಲ್ಲಿ ಹುದುಗಲಿದ್ದ ಸೀತೆ
ನೋವು ನಲಿವು ಕಲ್ಲು ಮುಳ್ಳು ಮರೆತು ಅಂದು ಸೀತೆ
ಕಾಡು ಬೆಟ್ಟ ಅರಸಿ ಶ್ರಮಿಸಿ ಕೊರಗಲಿಲ್ಲ ಸೀತೆ
ಬೆಂಕಿಯಿಂದ ಸುಡಲಿಲ್ಲ ಬೆಂದುಬಂದ ಸೀತೆ
ತಿರಸ್ಕಾರದ ಬಿಸಿ ಬೂದಿಯಾಳ್‌ ಬದುಕಿ ಉಳಿದಳ್‌ ಸೀತೆ
ಸಹನೆ ಪ್ರೀತಿ ಕ್ಷಮೆಯ ಮಹಿಮೆ ಉಳಿಸಲೆಂದು ಸೀತೆ

ಕರುಳ ಕುಡಿಯ ಹೊತ್ತು ಹೆತ್ತು ಒಂಟಿಯಾದಳಂತೆ
ಮುನಿಯಲಿಲ್ಲ ಮುನಿಯ ಬಳಿಯು ತವರಾಯಿತಂತೆ
ಇಮ್ಮಡಿಯ ಸಂತೋಷವು ವನಕಾಯಿತಂತೆ
ರಾಮನಿಲ್ಲದೆ ವನವಂದು ಕಾಡಾಯಿತಂತೆ

ರಾಮ ರಾಜ್ಯ ಯಾರಿಗಾಗಿ ಅವಳು ಒಂದು ಪ್ರಜೆಯೆ
ಕೇಳಿದನೊ ವೈದೇಹಿಯ ವೇದನೆಯ ಕರೆಯಾ
ಪರೀಕ್ಷೆ ಏಕೆ ಪರಿತ್ಯಾಗಕೆ ಕುಸಿವ ನೆಲದ ಮೇಲೆ
ತೊರೆದು ಬರಲು ತಡವು ಏಕೆ ಕರುಳ ಕರೆಯ ಮೇಲೆ
ತ್ಯಕ್ತ ಜೀವ ತೃಪ್ತಿ ಹೊಂದಿ ಗೆದ್ದು ಮರಳಿ ಮಣ್ಣ
ರಾಮನೇತಕೆ ಮರುಗುತಿಹನೋ ರಾಮರಾಜ್ಯದಿ ಇನ್ನ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X