ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪರಿತ್ಯಾಗವೋ? ತ್ಯಾಗವೊ?
ಪರಿತ್ಯಾಗವೋ? ತ್ಯಾಗವೊ?
-
ಡಾ.
ಕುಸುಮ
ಭಟ್,
ಪ್ಲಸಂಟ್
ಹಿಲ್ಲ್
,
ಕೆಲಿಫೋರ್ನಿಯ
E-mail : [email protected]
ಹೃದಯ ತುಂಬಿ ರಾಮನ ಮನ ಸಾಧ್ವಿಮಣಿ ಸೀತೆ
ರಾಮ ನೀನು ನನ್ನ ಜೀವ ಎಂದಳಂದು ಸೀತೆ
ಹಗಲು ಇರುಳು ಬಳಿಯೆ ಇರಲು ಭಾಗ್ಯವೆಂದ ಸೀತೆ
ರಾಣಿಯಾಗಿ
ಹೃದಯದಲ್ಲಿ
ಹುದುಗಲಿದ್ದ
ಸೀತೆ
ನೋವು
ನಲಿವು
ಕಲ್ಲು
ಮುಳ್ಳು
ಮರೆತು
ಅಂದು
ಸೀತೆ
ಕಾಡು
ಬೆಟ್ಟ
ಅರಸಿ
ಶ್ರಮಿಸಿ
ಕೊರಗಲಿಲ್ಲ
ಸೀತೆ
ಬೆಂಕಿಯಿಂದ
ಸುಡಲಿಲ್ಲ
ಬೆಂದುಬಂದ
ಸೀತೆ
ತಿರಸ್ಕಾರದ
ಬಿಸಿ
ಬೂದಿಯಾಳ್
ಬದುಕಿ
ಉಳಿದಳ್
ಸೀತೆ
ಸಹನೆ
ಪ್ರೀತಿ
ಕ್ಷಮೆಯ
ಮಹಿಮೆ
ಉಳಿಸಲೆಂದು
ಸೀತೆ
ಕರುಳ
ಕುಡಿಯ
ಹೊತ್ತು
ಹೆತ್ತು
ಒಂಟಿಯಾದಳಂತೆ
ಮುನಿಯಲಿಲ್ಲ
ಮುನಿಯ
ಬಳಿಯು
ತವರಾಯಿತಂತೆ
ಇಮ್ಮಡಿಯ
ಸಂತೋಷವು
ವನಕಾಯಿತಂತೆ
ರಾಮನಿಲ್ಲದೆ
ವನವಂದು
ಕಾಡಾಯಿತಂತೆ
ರಾಮ
ರಾಜ್ಯ
ಯಾರಿಗಾಗಿ
ಅವಳು
ಒಂದು
ಪ್ರಜೆಯೆ
ಕೇಳಿದನೊ
ವೈದೇಹಿಯ
ವೇದನೆಯ
ಕರೆಯಾ
ಪರೀಕ್ಷೆ
ಏಕೆ
ಪರಿತ್ಯಾಗಕೆ
ಕುಸಿವ
ನೆಲದ
ಮೇಲೆ
ತೊರೆದು
ಬರಲು
ತಡವು
ಏಕೆ
ಕರುಳ
ಕರೆಯ
ಮೇಲೆ
ತ್ಯಕ್ತ
ಜೀವ
ತೃಪ್ತಿ
ಹೊಂದಿ
ಗೆದ್ದು
ಮರಳಿ
ಮಣ್ಣ
ರಾಮನೇತಕೆ
ಮರುಗುತಿಹನೋ
ರಾಮರಾಜ್ಯದಿ
ಇನ್ನ
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Wednesday, April 23, 2003, 5:30 [IST]